Select Your Language

Notifications

webdunia
webdunia
webdunia
webdunia

ಭಾರತದಲ್ಲಿರುವ ಪುಡಿ ರೌಡಿಗಳ ಮೇಲೆ ಪಾಕಿಸ್ತಾನದ ಕಣ್ಣು

ಭಾರತದಲ್ಲಿರುವ ಪುಡಿ ರೌಡಿಗಳ ಮೇಲೆ ಪಾಕಿಸ್ತಾನದ ಕಣ್ಣು
ನವದೆಹಲಿ , ಮಂಗಳವಾರ, 25 ಆಗಸ್ಟ್ 2020 (12:35 IST)
ನವದೆಹಲಿ: ಭಾರತದಲ್ಲಿ ಶಾಂತಿ ಕದಡಲು ಯಾವುದಾದರೊಂದು ದಾರಿ ಹುಡುಕುತ್ತಿರುವ ಪಾಕಿಸ್ತಾನಕ್ಕೆ ಈಗ ಇಲ್ಲಿನ ಪುಡಿ ರೌಡಿಗಳ ಮೇಲೆ ಕಣ್ಣು ಬಿದ್ದಿದೆ. ಅವರನ್ನೇ ದಾಳವಾಗಿ ಬಳಸಿಕೊಂಡು ತಮ್ಮ ಬೇಳೆ ಬೇಯಿಸಲು ಮುಂದಾಗಿದೆ.


ಭಾರತದಲ್ಲಿನ ಭೂಗತ ಪಾತಕಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಪಾಕ್ ಉಗ್ರರು ಅವರನ್ನು ಬಳಸಿಕೊಂಡು ಗುಂಪು ಗಲಭೆ, ದೊಂಬಿ ಇತ್ಯಾದಿ ನಡೆಸಿ ಇಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಗುಪ್ತಚರ ವರದಿಗಳು ಎಚ್ಚರಿಸಿವೆ. ಈ ಒಪ್ಪಂದದಲ್ಲಿ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಕೂಡಾ ಭಾಗಿಯಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯಮಿಗಳಿಗೆ ಬಿಜೆಪಿ ಸಂಸದ ಹೇಳಿದ್ದೇನು?