Webdunia - Bharat's app for daily news and videos

Install App

ರಾಖಿ ಕಟ್ಟಿದವಳೇ ತಾಳಿ ಕಟ್ಟು ಅಂತಿದ್ದಾಳೆ…!

Webdunia
ಶುಕ್ರವಾರ, 10 ಮೇ 2019 (19:34 IST)
ಪ್ರಶ್ನೆ: ಸರ್, ನಾನು ಖಾಸಗಿ ಕಂಪನಿಯಲ್ಲಿ ಉತ್ತಮ ಹುದ್ದೆಯಲ್ಲಿರುವೆ. ನಾನು ಪದವಿ ಓದುತ್ತಿರುವಾಗ ಪಕ್ಕದ ಮನೆಯಲ್ಲಿದ್ದ ಪಿಯು ಓದುತ್ತಿದ್ದ ಯುವತಿಯನ್ನು ಇಷ್ಟಪಟ್ಟಿದ್ದೆ. ಅವಳೂ ಇಷ್ಟಪಟ್ಟಿದ್ದರೂ ಹೇಳಿರಲಿಲ್ಲ.

ಅವರ ಮನೆಯಲ್ಲಿ ವಿಷಯ ಗೊತ್ತಾಗಿ ನನ್ನ ಕೈಗೆ ಅವಳಿಂದ ರಕ್ಷಾ ಬಂಧನ ಕಟ್ಟಿಸಿದ್ದರು. ಆ ಬಳಿಕ ನಾನು ಅವಳಿಂದ ದೂರವೇ ಉಳಿದಿದ್ದೆ. ಆ ಬಳಿಕ ಮುಂಬೈಗೆ ಹೋಗಿ ವಿದ್ಯಾಭ್ಯಾಸ ಮಾಡಿದ ಬಳಿಕ ಈಗ ದೊಡ್ಡ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವೆ. ನಿರುದ್ಯೋಗಿಯಾಗಿದ್ದ ರಾಖಿ ಕಟ್ಟಿದ ಆ ಯುವತಿ ಪದೇ ಪದೇ ನನ್ನ ಭೇಟಿ ಮಾಡಿ ಕೆಲಸ ಕೊಡಿಸುವಂತೆ ಕೇಳಿದ್ದಳು. ನಾನು ಹಳೆಯದನ್ನು ಮರೆತು ನನ್ನ ಕಚೇರಿಯಲ್ಲಿಯೇ ಕೆಲಸ ಕೊಡಿಸಿರುವೆ.

ಆದರೆ ಆಕೆ ನನ್ನ ಕೊಠಡಿಗೆ ಪದೇ ಪದೇ ಬಂದು ಮೈ ಮೇಲೆ ಬೀಳುತ್ತಿದ್ದಾಳೆ. ಮೊದಲೇ ಇಷ್ಟ ಪಟ್ಟ ಹುಡುಗಿ ಅಂತ ನಾನು ಅವಳನ್ನು ಅನುಭವಿಸಿದೆ. ಸಮಯ ಸಿಕ್ಕಾಗಲೆಲ್ಲಾ ಅವಳ ಜತೆ ಒಂದಾಗುತ್ತಿರುವೆ. ಆದರೆ ರಾಖಿ ಕಟ್ಟಿರುವ ಹುಡುಗಿಯೇ ಈಗ ತಾಳಿ ಕಟ್ಟು ಅನ್ನುತ್ತಿದ್ದಾಳೆ. ಮುಂದೇನು ಮಾಡಬೇಕು ಗೊತ್ತಾಗುತ್ತಿಲ್ಲ.

ಉತ್ತರ: ಉತ್ತಮ ಬಾಂಧವ್ಯದ ಸಂಬಂಧಗಳಿಗೆ ನಿಜವಾದ ಬೆಲೆ ಕೊಡೋರು ಕಡಿಮೆಯೇ. ನೀವು ಮನಸ್ಸಿನಲ್ಲಿ ಅವಳ ಬಗ್ಗೆ ಒಲವು ಇಟ್ಟುಕೊಂಡು ಅವಳಿಂದ ರಾಖಿ ಕಟ್ಟಿಸಿಕೊಳ್ಳಬಾರದಿತ್ತು.

ಆ ಬಳಿಕವಾದರೂ ನೀವು ಅವಳ ರಾಖಿಗೆ ಬೆಲೆ ಕೊಡಬೇಕಿತ್ತು. ನೀವು ಸಂಬಂಧಗಳನ್ನು ಮೀರಿ ಒಂದಾಗಿ ಸುಖಿಸಿದ್ದೀರಿ. ಅವಳಿಗೆ ಬಾಳುಕೊಡಿ. ಸುಖವಾಗಿರಿ. ಅವಳ ಮನೆಯಲ್ಲಿನ ಹಿರಿಯರನ್ನು ಮದುವೆಗೆ ಒಪ್ಪಿಸಿ.


ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments