Select Your Language

Notifications

webdunia
webdunia
webdunia
webdunia

ಅಪ್ಪ-ಮಕ್ಕಳಿಗೆ ಸುಳ್ಳು ಹೇಳುವುದೇ ಕೆಲಸ ಎಂದ BSY

ಅಪ್ಪ-ಮಕ್ಕಳಿಗೆ ಸುಳ್ಳು ಹೇಳುವುದೇ ಕೆಲಸ ಎಂದ BSY
ಉತ್ತರ ಕನ್ನಡ , ಮಂಗಳವಾರ, 16 ಏಪ್ರಿಲ್ 2019 (18:34 IST)
ಈ ಬಾರಿ ಮತ್ತು ಮುಂದಿನ ಬಾರಿನೂ ಮೋದಿ ಅವರು ಪ್ರಧಾನಿಯಾಗಲಿದ್ದಾರೆ. ಕುಮಾರಸ್ವಾಮಿ ನೆತೃತ್ವದ ಸರಕಾರ, ವರ್ಗಾವಣೆ ದಂಧೆ, ಲೂಟಿ ಹೊಡೆಯುವುದರಲ್ಲಿ ದಂಧೆ ಮಾಡುತ್ತಿದ್ದಾರೆ. ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ಆರೋಪಿಸಿದ್ದಾರೆ.
ಬಿಜೆಪಿ ಸಮಾವೇಶದಲ್ಲಿ ಯಡಿಯೂರಪ್ಪ ಮಾತನಾಡಿದ್ದು, ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.  

ಉತ್ತರ ಕನ್ನಡ ಲೋಕಸಭಾ ಅಭ್ಯರ್ಥಿ ಅನಂತಕುಮಾರ ಹೆಗಡೆ ಪರವಾಗಿ ಸಮಾವೇಶಕ್ಕೆ ಬಂದ ಯಡಿಯೂರಪ್ಪ ಮಾತನಾಡಿ,
ಕುಮಾರಸ್ವಾಮಿ ಭ್ರಷ್ಟಾಚಾರ ಮುಖ್ಯಮಂತ್ರಿಯಾಗಿದ್ದಾರೆ. ತಘುಲಕ್ ದರ್ಬಾರ ನ ಮುಖ್ಯಮಂತ್ರಿಯಾಗಿದ್ದಾರೆ.

ಈ ಬಾರಿ ಬಿಜೆಪಿ 22 ಕ್ಷೆತ್ರಗಳನ್ನು ಗೆಲ್ಲುತ್ತೆ ಎಂದರು. ಈ ಭ್ರಷ್ಟ ಸರಕಾರವನ್ನ ಕಿತ್ತೊಗೆಯಬೇಕು. ಮಂಡ್ಯದಲ್ಲಿ ಸುಮಲತಾ ಗೆಲ್ಲುವುದು ನಿಶ್ಚಿತ ಅಂತ ಯಡಿಯೂರಪ್ಪ ಹೇಳಿದ್ರು.

ಅಪ್ಪ ಮಕ್ಕಳು, ಸೊಸೆಯಂದಿರು, ಇಗ ರಾಜ್ಯಕ್ಕೆ ದೇವೇಗೌಡರ ಮೊಮ್ಮಕ್ಕಳ ಕಾಟ ಹೆಚ್ಚಾಗಿದೆ. ಅಪ್ಪ- ಮಕ್ಕಳಿಗೆ ಸುಳ್ಳು ಹೇಳುವುದೇ ಕಾಯಕವಾಗಿದೆ ಎಂದು ಟೀಕಿಸಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ಗಳಲ್ಲಿ ಇವರೇನು ಮಾಡ್ತಿದ್ರು ಗೊತ್ತಾ?