Publish Date: Tue, 16 Apr 2019 (15:58 IST)
Updated Date: Tue, 16 Apr 2019 (16:00 IST)
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ವಿರುದ್ದ ಪುಟ್ಟರಾಜು ವಾಗ್ದಾಳಿ ನಡೆಸಿದ್ದಾರೆ.
ಪಕ್ಷೇತರ ಅಭ್ಯರ್ಥಿ ಸುಮಲತಾ ಮುಸ್ಲಿಂ ಮತಗಳಿಕೆಗಾಗಿ ಬಿಜೆಪಿ ಅಭ್ಯರ್ಥಿ ಅಲ್ಲ ಅಂತಾರೆ ಅಂತ ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ ನೀಡಿದ್ದಾರೆ.
ಆದ್ರೆ ಹೋಟೆಲ್ನಲ್ಲಿ ಕುಳಿತು ಬಿಜೆಪಿ ನಾಯಕರ ಜೊತೆ ಸುಮಲತಾ ಮಾತುಕತೆ ನಡೆಸ್ತಾರೆ. ನರೇಂದ್ರ ಮೋದಿ ಸಂಪುಟದಲ್ಲಿ ಮಂತ್ರಿ ಮಾಡಿಸ್ಬೇಕು ಅಂತ ಹೇಳ್ತಾರೆ ಎಂದು ಟೀಕೆ ಮಾಡಿದ್ರು.
18 ನೇ ತಾರೀಖು ಕಳೆಯಲಿ, ವಿತ್ ವಿಡಿಯೋ ಕ್ಲಿಪ್ ಬಿಡುಗಡೆ ಮಾಡ್ತೀವಿ. ಆಹಾ...ಯಾವ ಪಿಹೆಚ್ಡಿ ಮಾಡಿರೋರು ಆಡದಂತ ಮಾತುಗಳನ್ನು ಸುಮಲತಾ ಆಡ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ದೇವೆಗೌಡರು ಕೈಕಟ್ಟಿ ನಿಲ್ಲುವಂತ ಮಾತುಗಾರಿಕೆಯನ್ನ ಬೆಳೆಸಿಕೊಂಡಿದ್ದಾರೆ ಅಂತಾನೂ ಟಾಂಗ್ ನೀಡಿದ್ದಾರೆ.