ನಮ್ಮ ಆರೋಗ್ಯ ಉತ್ತಮವಾಗಿರಬೇಕು ಎಂದರೆ ಮೆಡಿಕಲ್ ನಲ್ಲಿ ಸಿಗುವ ಗುಳಿಗೆಗಳು ಮಾತ್ರವಲ್ಲ. ಈ ಆರು ಅಂಶಗಳು ಮುಖ್ಯ ಪಾತ್ರ ವಹಿಸುತ್ತದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಯಾವಾಗಲೂ ಹೇಳುತ್ತಾರೆ.
ಮೆಡಿಕಲ್ ನಲ್ಲಿ ಸಿಗುವ ಔಷಧಿಗಳು ಒಂದು ಖಾಯಿಲೆ ಗುಣಪಡಿಸಿದರೂ ಅದರಿಂದ ಇನ್ನೊಂದು ಅಡ್ಡಪರಿಣಾಮಗಳಿರಬಹುದು. ಇದು ದುಬಾರಿಯೂ ಹೌದು. ಆದರೆ ನಿಸರ್ಗದಲ್ಲಿ ಸಿಗುವ ಔಷಧಿ ಹಾಗಲ್ಲ. ಡಾ ಸಿಎನ್ ಮಂಜುನಾಥ್ ಪ್ರಕಾರ ನಿಸರ್ಗದಲ್ಲಿ ಸಿಗುವ ಔಷಧಿಗಳು ಯಾವುವು?
ನಿಸರ್ಗದಲ್ಲಿ ಸಿಗುವ ಆರು ಔಷಧಗಳು ನಮ್ಮ ಆರೋಗ್ಯಕ್ಕೆ ತುಂಬಾ ಮುಖ್ಯ. ಅದರಲ್ಲಿ ಮೊದಲನೆಯದ್ದು ಸನ್ ಲೈಟ್, ಎರಡನೆಯದ್ದು ಡಯಟ್, ಮೂರನೆಯದ್ದು ವ್ಯಾಯಾಮ, ನಾಲ್ಕನೆಯದ್ದು ಫ್ರೆಂಡ್ ಶಿಪ್, ಐದನೆಯದ್ದು ಆತ್ಮವಿಶ್ವಾಸ ಮತ್ತು ಆರನೆಯದ್ದು ನಗು.
ಇಂದು ಬಹುತೇಕರು ನಗಲೂ ಕಷ್ಟಪಡುತ್ತಾರೆ. ಆದರೆ ನಮ್ಮೆಲ್ಲಾ ರೋಗಗಳಿಗೆ ಈ ಆರು ಅಂಶಗಳೇ ಪರಿಹಾರ. ಇವಿಷ್ಟನ್ನು ಪಾಲಿಸಿಕೊಂಡು ಬಂದರೆ ಮೆಡಿಕಲ್ ನಲ್ಲಿ ಸಿಗುವ ಯಾವ ಔಷಧಿಗಳೂ ಬೇಕಾಗಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿದೆ.