Select Your Language

Notifications

webdunia
webdunia
webdunia
webdunia

‘ನೀನು ನನ್ನ ಮಗಳಿದ್ದಂತೆ! ಥ್ಯಾಂಕ್ಯೂ ಹೇಳಬೇಡ’

‘ನೀನು ನನ್ನ ಮಗಳಿದ್ದಂತೆ! ಥ್ಯಾಂಕ್ಯೂ ಹೇಳಬೇಡ’
ನವದೆಹಲಿ , ಗುರುವಾರ, 7 ಸೆಪ್ಟಂಬರ್ 2017 (08:21 IST)
ನವದೆಹಲಿ: ಕ್ರಿಕೆಟಿಗ ಗೌತಮ್ ಗಂಭೀರ್ ಕಾಶ್ಮೀರದ ಹುತಾತ್ಮ ಪೊಲೀಸ್ ಅಧಿಕಾರಿಯ ಪುತ್ರಿಯ ವಿದ್ಯಾಭ್ಯಾಸಕ್ಕೆ ನೆರವಾಗಲು ಹೊರಟಿರುವುದು ಭಾರೀ ಸುದ್ದಿಯಾಗಿದೆ.

 
ಕಳೆದ ತಿಂಗಳು ಉಗ್ರರಿಂದ ಹತರಾದ ಪೊಲೀಸ್ ಅಧಿಕಾರಿ ಅಬ್ದುಲ್ ರಶೀದ್ ರ ಐದು ವರ್ಷದ ಪುತ್ರಿ ಝೋಹ್ರಾ ಕ್ರಿಕೆಟಿಗನ ಈ ಹೃದಯವಂತಿಕೆಯನ್ನು ಮೆಚ್ಚಿ ಧನ್ಯವಾದ ತಿಳಿಸಿದ್ದಾಳೆ. ‘ಥ್ಯಾಂಕ್ಯೂ  ಗೌತಮ್ ಸರ್. ನಿಮ್ಮ ಉದಾರ ಮನೋಭಾವಕ್ಕೆ ನಾನು ಹಾಗೂ ನನ್ನ ಕುಟುಂಬ ಧನ್ಯವಾದ ತಿಳಿಸಲು ಬಯಸುತ್ತೇವೆ. ನನಗೆ ಡಾಕ್ಟರ್ ಆಗಬೇಕು’ ಎಂದು ಝೋಹ್ಯಾ ಮಾಧ್ಯಮಗಳಿಗೆ ಹೇಳಿದ್ದಳು.

ಇದಕ್ಕೆ ಪ್ರತಿಕ್ರಿಯಿಸಿರುವ ಗಂಭೀರ್ ‘ನೀನು ನನ್ನ ಮಗಳಿದ್ದಂತೆ. ಥ್ಯಾಂಕ್ಯೂ ಹೇಳಬೇಡ. ನೀನು ವೈದ್ಯೆಯಾಗಬೇಕೆಂದು ಕನಸು ಹೊತ್ತಿರುವೆ ಎಂದು ತಿಳಿಯಿತು. ಅದನ್ನು ನನಸು ಮಾಡು’ ಎಂದಿದ್ದಾರೆ.

ಇದನ್ನೂ ಓದಿ.. ಸೋನಿಯಾ ಗಾಂಧಿಯ ಭದ್ರತಾ ಕಮಾಂಡೋ ನಾಪತ್ತೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧವನ್ ಅನುಪಸ್ಥಿತಿಯಲ್ಲೂ ಕೆಎಲ್ ರಾಹುಲ್ ಗಿಲ್ಲ ಆರಂಭಿಕ ಸ್ಥಾನ!