Publish Date: Mon, 19 Jun 2017 (12:03 IST)
Updated Date: Mon, 19 Jun 2017 (12:05 IST)
ನವದೆಹಲಿ: ಭಾರತದ ನೆಲದಲ್ಲಿದ್ದುಕೊಂಡು ಪಾಕಿಸ್ತಾನ ಕ್ರಿಕೆಟ್ ತಂಡದ ಗೆಲುವನ್ನು ಸಂಭ್ರಮಿಸಿದ ಕಾಶ್ಮೀರ ಪ್ರತ್ಯೇಕತವಾದಿ ಸಂಘಟನೆ ಹುರಿಯತ್ ಮುಖ್ಯಸ್ಥ ಮಿರ್ ವಾಯಿಸ್ ಉಮರ್ ಫಾರುಖ್ ಗೆ ಕ್ರಿಕೆಟಿಗ ಗೌತಮ್ ಗಂಭೀರ್ ತಪರಾಕಿ ನೀಡಿದ್ದಾರೆ.
ನಿನ್ನೆ ಭಾರತ ತಂಡದ ವಿರುದ್ಧ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕ್ ಭರ್ಜರಿಯಾಗಿ ಗೆಲುವು ಕಂಡಿತ್ತು. ಈ ಹಿನ್ನಲೆಯಲ್ಲಿ ಹುರಿಯತ್ ಮುಖ್ಯಸ್ಥ ಉಮರ್ ಟ್ವಿಟರ್ ನಲ್ಲಿ ಶುಭಾಷಯ ಕೋರಿದ್ದರು. ‘ಎಲ್ಲಾ ಕಡೆ ಪಟಾಕಿ ಸದ್ದು ಕೇಳಿಸುತ್ತಿದೆ. ಈದ್ ಮೊದಲೇ ಬಂದಿದೆಯೇನೋ ಅನಿಸುತ್ತದೆ’ ಎಂದು ಉಮರ್ ಟ್ವಟರ್ ನಲ್ಲಿ ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಗಂಭೀರ್ ಪಾಕ್ ಗೆಲುವನ್ನು ಸಂಭ್ರಮಿಸಬೇಕಾದರೆ ಪಾಕಿಸ್ತಾನಕ್ಕೇ ಗಂಟು ಮೂಟೆ ಕಟ್ಟಿ. ಯಾಕೆ ನೀವು ಗಡಿ ದಾಟಬಾರದು? ಯಾಕೆ ಅಲ್ಲೇ ಈದ್ ಆಚರಿಸಬಾರದು? ಬೇಕಿದ್ದರೆ ಗಂಟು ಮೂಟೆ ಕಟ್ಟಲು ನಾನೇ ಸಹಾಯ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ