Select Your Language

Notifications

webdunia
webdunia
webdunia
webdunia

ತವರಿನಲ್ಲಾದರೂ ಒಲಿಯುತ್ತಾ ಕೆಎಲ್ ರಾಹುಲ್ ಗೆ ಅದೃಷ್ಟ?

ತವರಿನಲ್ಲಾದರೂ ಒಲಿಯುತ್ತಾ ಕೆಎಲ್ ರಾಹುಲ್ ಗೆ ಅದೃಷ್ಟ?
ಬೆಂಗಳೂರು , ಬುಧವಾರ, 27 ಸೆಪ್ಟಂಬರ್ 2017 (06:57 IST)
ಬೆಂಗಳೂರು: ಟೀಂ ಇಂಡಿಯಾದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಪೈಪೋಟಿ ಪ್ರಾರಂಭವಾದ ಮೇಲೆ ಕನ್ನಡಿಗ ಕ್ರಿಕೆಟಿಗ ಕೆಎಲ್ ರಾಹುಲ್ ಗೆ ಅವಕಾಶವೇ ಇಲ್ಲದಂತಾಗಿದೆ. ಆದರೆ  ನಾಳೆ ನಡೆಯುವ ತವರಿನ ಪಂದ್ಯದಲ್ಲಾದರೂ ಅವರಿಗೆ ಆಡಲು ಅವಕಾಶ ಸಿಗುತ್ತಾ ಕಾದು ನೋಡಬೇಕಿದೆ.

 
ಶಿಖರ್ ಧವನ್ ಕೊನೆಯ ಎರಡು ಪಂದ್ಯಗಳಿಗೂ ಮರಳುವುದಿಲ್ಲ ಎನ್ನುವುದು ಖಾತ್ರಿಯಾಗಿದೆ. ಇದೀಗ ಆರಂಭಿಕರಾಗಿ ಅಜಿಂಕ್ಯಾ ರೆಹಾನೆ ಮತ್ತು ರೋಹಿತ್ ಶರ್ಮಾ ಕ್ಲಿಕ್ ಆಗಿರುವುದರಿಂದ ಆರಂಭಿಕ ಸ್ಥಾನ ಸಿಗುವುದು ಡೌಟು.

ಮಧ್ಯಮ ಕ್ರಮಾಂಕದಲ್ಲಿ ಕಳೆದ ಕೆಲವು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶಿಸದ ಕೇದಾರ್ ಜಾದವ್ ಸ್ಥಾನದಲ್ಲಿ ರಾಹುಲ್ ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಈಗಾಗಲೇ ಸರಣಿ ಗೆದ್ದಿರುವುದರಿಂದ ಇದುವರೆಗೆ ಅವಕಾಶ ಸಿಗದ ಆಟಗಾರರಿಗೆ ನಾಯಕ ಕೊಹ್ಲಿ ಅವಕಾಶ ನೀಡುವ ಸಾಧ್ಯತೆಯಿದೆ. ಹಾಗಾಗಿ ತವರಿನಲ್ಲಾದರೂ ರಾಹುಲ್ ಗೆ ಅವಕಾಶ ಸಿಗಬಹುದೆಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಅಂದಿನ ಆಸ್ಟ್ರೇಲಿಯಾದ ನೆರಳೂ ಈಗಿನ ತಂಡದಲ್ಲಿ ಕಾಣಿಸಲ್ಲ’