Select Your Language

Notifications

webdunia
webdunia
webdunia
webdunia

ಬೆಂಗಳೂರು ಪಂದ್ಯಕ್ಕೂ ವರುಣನ ಭೀತಿ

ಬೆಂಗಳೂರು ಪಂದ್ಯಕ್ಕೂ ವರುಣನ ಭೀತಿ
ಬೆಂಗಳೂರು , ಮಂಗಳವಾರ, 26 ಸೆಪ್ಟಂಬರ್ 2017 (09:47 IST)
ಬೆಂಗಳೂರು: ನಾಳೆ ಭಾರತ ಮತ್ತು  ಆಸ್ಟ್ರೇಲಿಯಾ ನಡುವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಲ್ಕನೇ ಏಕದಿನ ಪಂದ್ಯ ನಡೆಯಲಿದೆ. ಆದರೆ ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿರುವುದರಿಂದ ಪಂದ್ಯ ನಡೆಯಬಹುದೇ ಎಂಬ ಅನುಮಾನ ಮೂಡಿಸಿದೆ.


ಕೆಲವು ದಿನ ವಿರಮಿಸಿದ್ದ ಮಳೆ ಮತ್ತೆ ಶುರುವಾಗಿದೆ. ಹಾಗಾಗಿ ನಾಳಿನ ಪಂದ್ಯಕ್ಕೆ ವರುಣ ಬಿಡುವು ಕೊಟ್ಟು ಪಂದ್ಯ ಪೂರ್ಣವಾಗಿ ನಡೆಯಲು ಅನುವು ಮಾಡಿಕೊಡಬಹುದೇ ಎಂಬುದೇ ಅನುಮಾನ.

ಈಗಾಗಲೇ ಟೀಂ ಇಂಡಿಯಾ ಸರಣಿ ಗೆದ್ದಿದೆಯಾದರೂ, ನಾಳಿನ ಪಂದ್ಯ ಮಳೆಯಿಂದ ರದ್ದಾದರೆ ಕ್ಲೀನ್ ಸ್ವೀಪ್ ಆಸೆಗೆ ತಣ್ಣೀರು ಸುರಿದಂತಾಗಲಿದೆ. ಹವಾಮಾನ ಇಲಾಖೆಯೂ ಮುಂದಿನ 24 ರಿಂದ 48 ಗಂಟೆವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೈಟ್ ವಾಶ್ ಬೇಡ, ಆಸ್ಟ್ರೇಲಿಯಾವನ್ನು ಬ್ಲೂವಾಶ್ ಮಾಡಿ ಎಂದ ಸಚಿನ್