Select Your Language

Notifications

webdunia
webdunia
webdunia
webdunia

ಬ್ರೇಕ್ ನಂತರ ಬೆಂಗಳೂರಿಗೆ ಬಂದ ಮಳೆರಾಯ

ಬ್ರೇಕ್ ನಂತರ ಬೆಂಗಳೂರಿಗೆ ಬಂದ ಮಳೆರಾಯ
ಬೆಂಗಳೂರು , ಸೋಮವಾರ, 25 ಸೆಪ್ಟಂಬರ್ 2017 (07:50 IST)
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೆಲವು ದಿನ ಬಿಡುವು ಪಡೆದಿದ್ದ ಮಳೆರಾಯ ಮತ್ತೆ ಆರ್ಭಟಿಸಿದ್ದಾನೆ. ನಿನ್ನೆ ರಾತ್ರಿ ಧಾರಾಕಾರ ಮಳೆ ಸುರಿದಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.

 
ಯಶವಂತಪುರ, ಮೇಖ್ರಿ ಸರ್ಕಲ್, ಶಿವಾನಂದ ಸರ್ಕಲ್,  ಶಾಂತಿನಗರ, ಹೆಬ್ಬಾಳ,  ಬಸವನಗುಡಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಸುರಿದಿದ್ದು, ರಸ್ತೆಯಲ್ಲಿ ನೀರು ತುಂಬಿದೆ.

ಮಳೆಯಿಂದಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಇನ್ನು ಕೆಲವೆಡೆ ಕಸದ ರಾಶಿ ಮಳೆಯಲ್ಲಿ ಕೊಚ್ಚಿಕೊಂಡು ಬಂದಿದ್ದರಿಂದ ಜನಸಾಮಾನ್ಯರು ಬಿಬಿಎಂಪಿಗೆ ಹಿಡಿ ಶಾಪ ಹಾಕುವಂತಾಗಿದೆ. ಇಂದೂ ಮಳೆಯ ಅಬ್ಬರ ಮುಂದುವರಿದು, ಸೋಮವಾರವಾದ್ದರಿಂದ ಕಚೇರಿ ಕೆಲಸಗಳಿಗೆ, ಶಾಲಾ ಕಾಲೇಜುಗಳಿಗೆ ತೆರಳಲು ಜನಸಾಮಾನ್ಯರು ಕಷ್ಟಪಡುವಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ನಾಲಿಗೆಯಿಂದ ಜೇನುತುಪ್ಪ ನೆಕ್ಕು ಎಂದನಂತೆ ಈ ‘ಬಾಬಾ’!