Publish Date: Fri, 22 Sep 2017 (09:40 IST)
Updated Date: Fri, 22 Sep 2017 (09:44 IST)
ಮೈಸೂರು: ದಸರಾಗೆ ಚಾಲನೆ ನೀಡಲು ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಹೋಗುವಾಗ ಮುಗ್ಗಿರಿಸಿದ ಘಟನೆ ನಡೆದಿದೆ. ಆದರೆ ಆ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಸಾಹಿತಿ ನಿಸಾರ್ ಅಹಮ್ಮದ್ ಸಿದ್ದರಾಮಯ್ಯನವರಿಗೆ ಆಸರೆ ನೀಡಿದರು.
ವೇದಿಕೆ ಕಡೆಗೆ ಹೋಗುತ್ತಿದ್ದ ಸಿಎಂ ಪಂಚೆ ಕಾಲಿಗೆ ಸುತ್ತಿಕೊಂಡು ಮುಗ್ಗರಿಸಿದರು. ಇನ್ನೇನು ಬೀಳಲಿದ್ದ ಅವರನ್ನು ಪಕ್ಕದಲ್ಲಿಯೇ ಇದ್ದ ನಿಸಾರ್ ಅಹಮ್ಮದ್ ಕೈ ಹಿಡಿದು ತಡೆದರು. ಇದರಿಂದಾಗಿ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ.
ನಂತರ ಕಾರ್ಯಕ್ರಮ ಮುಗಿಸಿ ಕಾರಿನ ಬಳಿಗೆ ಆಗಮಿಸುತ್ತಿದ್ದಂತೆ ಕಾಲಿಲ್ಲದ ವೃದ್ಧೆಯೊಬ್ಬರು ಸಿಎಂ ಎದುರು ಸಹಾಯಕ್ಕಾಗಿ ಅಂಗಲಾಚಿದರು. ಈ ಸಂದರ್ಭದಲ್ಲಿ ಆಕೆಗೆ ಮನೆ ಮಂಜೂರು ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಸಿಎಂ ತಮ್ಮ ಜೇಬಿನಲ್ಲಿದ್ದ 5 ಸಾವಿರ ರೂ. ನೀಡಿ ಸಾಂತ್ವನ ನೀಡಿದರು.