Publish Date: Wed, 27 Dec 2017 (07:14 IST)
Updated Date: Wed, 27 Dec 2017 (07:19 IST)
ದೆಹಲಿ: ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಬಿಹಾರದ ಮಂಗಲಪುರದ 12 ವರ್ಷದ ಬಾಲಕ ಭೀಮ್ ಯಾದವನನ್ನು ರಿಯಲ್ ಹೀರೋ ಅಂತ ಹೊಗಳಿದ್ದಾರೆ.
ಏಕೆಂದರೆ ಈತ ರೈಲು ಹಳಿ ಮುರಿದಿರುವುದನ್ನು ಕಂಡು ತಾನು ಧರಿಸಿದ್ದ ಕೆಂಪು ಬಣ್ಣದ ಅಂಗಿಯನ್ನು ಕಳಚಿ ರೈಲು ಬರುತ್ತಿರುವ ಕಡೆ ಬೀಸಿ ರೈಲ್ ಅನ್ನು ನಿಲ್ಲಿಸಿ ಭೀಕರವಾದ ಅಪಘಾತವನ್ನು ತಪ್ಪಿಸಿದ್ದ. ಆ ಮುರಿದ ಹಳಿಯ ಮೇಲೆ ರೈಲು ಚಲಿಸಿದ್ದರೆ ಅಪಘಾತವಾಗುವುದು ಗ್ಯಾರಂಟಿ.
ಇಂತಹ ಅನಾಹುತವನ್ನು ತಪ್ಪಿಸಿ ನೂರಾರು ಜನರ ಪ್ರಾಣ ಉಳಿಸಿದ ಭೀಮ್ ಯಾದವ್ ನಿಜವಾದ ಹೀರೋ ಎಂದು ವೀರೇಂದ್ರ ಸೆಹ್ವಾಗ್ ಅವರು ಬಾಲಕನ ಫೋಟೋ ಹಾಕಿ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ