Select Your Language

Notifications

webdunia
webdunia
webdunia
webdunia

ಧೋನಿ ವಿಚಾರದಲ್ಲಿ ಜನರಿಗೆ ತಾಳ್ಮೆಯೇ ಇಲ್ಲ ಎಂದ ವಿರಾಟ್ ಕೊಹ್ಲಿ

ಧೋನಿ ವಿಚಾರದಲ್ಲಿ ಜನರಿಗೆ ತಾಳ್ಮೆಯೇ ಇಲ್ಲ ಎಂದ ವಿರಾಟ್ ಕೊಹ್ಲಿ
ಮುಂಬೈ , ಬುಧವಾರ, 15 ಮೇ 2019 (09:11 IST)
ಮುಂಬೈ: ಧೋನಿ ಒಂದೇ ಒಂದು ವೈಫಲ್ಯ ಕಂಡರೂ ಟೀಕಿಸುವ ಜನರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಿರುಗೇಟು ನೀಡಿದ್ದಾರೆ.


ಸಂದರ್ಶನವೊಂದರಲ್ಲಿ ಮಾತನಾಡಿರುವ ಕೊಹ್ಲಿ ಯಾವುದೇ ಬ್ಯಾಟ್ಸ್ ಮನ್ ಒಂದೇ ಸಲ ವಿಫಲರಾದದರೂ ಜನ ಅವರ ಬಗ್ಗೆ ಟೀಕೆ ಮಾಡಲು ಶುರು ಮಾಡುತ್ತಾರೆ. ಜನರಿಗೆ ತಾಳ್ಮೆಯೇ ಇಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

ನಾನು ಮೊದಲೇ ಹೇಳಿದ ಹಾಗೆ ಧೋನಿ ಒಬ್ಬ ಅಮೂಲ್ಯ ಆಟಗಾರ. ವಿಕೆಟ್ ಹಿಂದುಗಡೆ, ಮೈದಾನದಲ್ಲಿ, ಬ್ಯಾಟಿಂಗ್ ನಲ್ಲಿ ಅವರ ತಿಳುವಳಿಕೆ ನನಗೆ ಸಾಕಷ್ಟು ಸಹಾಯ ಮಾಡುತ್ತದೆ. ಅವರಂತಹ ಆಟಗಾರರು ನಮ್ಮ ತಂಡಕ್ಕೆ ಆಸ್ತಿ ಇದ್ದಂತೆ ಎಂದು ಕೊಹ್ಲಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟರ್ ಟ್ವೀಟ್ ನಲ್ಲೂ ದಾಖಲೆ ಮಾಡಿದ ಐಪಿಎಲ್