Select Your Language

Notifications

webdunia
webdunia
webdunia
webdunia

ನಿಷೇಧ ಮುಗಿಸಿ ಕ್ರಿಕೆಟ್ ಗೆ ಮರಳಲಿರುವ ಎಸ್ ಶ್ರೀಶಾಂತ್

ನಿಷೇಧ ಮುಗಿಸಿ ಕ್ರಿಕೆಟ್ ಗೆ ಮರಳಲಿರುವ ಎಸ್ ಶ್ರೀಶಾಂತ್
ಕೊಚ್ಚಿ , ಶುಕ್ರವಾರ, 19 ಜೂನ್ 2020 (09:47 IST)
ಕೊಚ್ಚಿ: ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಲ್ಲಿ ನಿಷೇಧಕ್ಕೊಳಗಾಗಿದ್ದ ಕೇರಳ ಮೂಲದ ಟೀಂ ಇಂಡಿಯಾ ವೇಗಿ ಎಸ್ ಶ್ರೀಶಾಂತ್ ಮತ್ತೆ ಕ್ರಿಕೆಟ್ ಗೆ ಮರಳಲಿದ್ದಾರೆ.


ಅಜೀವ ನಿಷೇಧಕ್ಕೊಳಗಾಗಿದ್ದ ಶ್ರೀಶಾಂತ್ ಕಳೆದ ವರ್ಷ ಸುಪ್ರೀಂಕೋರ್ಟ್ ನಲ್ಲಿ ಸುದೀರ್ಘ ಕಾನೂನು ಹೋರಾಟ ನಡೆಸಿ ಶಿಕ್ಷೆ ಕಡಿತ ಮಾಡಿಕೊಂಡಿದ್ದರು. ಅದರಂತೆ ಸೆಪ್ಟೆಂಬರ್ 13 ‍ಕ್ಕೆ ಶ್ರೀಶಾಂತ್ ಶಿಕ್ಷೆಯ ಅವಧಿ ಮುಗಿಯಲಿದೆ.

ಹೀಗಾಗಿ ಫಿಟ್ನೆಸ್ ಪರೀಕ್ಷೆ ಪಾಸ್ ಮಾಡಿಕೊಂಡರೆ ಶ್ರೀಶಾಂತ್ ರನ್ನು ಕೇರಳ ರಣಜಿ ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಕೇರಳ ತಂಡದ ಕೋಚ್ ಟಿನು ಯೊಹಾನನ್ ಹೇಳಿದ್ದಾರೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಶಾಂತ್ ನನಗೆ ಮತ್ತೊಂದು ಅವಕಾಶ ನೀಡುತ್ತಿರುವ ಕೇರಳ ಕ್ರಿಕೆಟ್ ಅಸೋಸಿಯೇಷನ್ ಗೆ ಧನ್ಯವಾದ. ನನ್ನ ಫಿಟ್ನೆಸ್ ಸಾಬೀತುಪಡಿಸಿ ತಂಡಕ್ಕೆ ಮರಳುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

2011 ರ ವಿಶ್ವಕಪ್ ಫಿಕ್ಸ್ ಆಗಿತ್ತು ಎಂದ ಶ್ರೀಲಂಕಾ ಸಚಿವ