Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಸ್ಪೂರ್ತಿ ಪ್ರಶಸ್ತಿ ವಿರಾಟ್ ಕೊಹ್ಲಿ ಪಾಲಾಗಿದ್ದರ ಬಗ್ಗೆ ಪಾಕ್ ಬೌಲರ್ ಅಮೀರ್ ಹೇಳಿದ್ದೇನು ಗೊತ್ತಾ?

ಕ್ರಿಕೆಟ್ ಸ್ಪೂರ್ತಿ ಪ್ರಶಸ್ತಿ ವಿರಾಟ್ ಕೊಹ್ಲಿ ಪಾಲಾಗಿದ್ದರ ಬಗ್ಗೆ ಪಾಕ್ ಬೌಲರ್ ಅಮೀರ್ ಹೇಳಿದ್ದೇನು ಗೊತ್ತಾ?
ದುಬೈ , ಗುರುವಾರ, 16 ಜನವರಿ 2020 (09:35 IST)
ದುಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2019 ನೇ ಸಾಲಿನ ಕ್ರಿಕೆಟ್ ಸ್ಪೂರ್ತಿ ಪ್ರಶಸ್ತಿ ಪಡೆದ ಕುರಿತು ಪಾಕ್ ಬೌಲರ್ ಮೊಹಮ್ಮದ್ ಅಮೀರ್ ಪ್ರತಿಕ್ರಿಯಿಸಿದ್ದಾರೆ.


ಮೈದಾನದಲ್ಲಿ ಪಾಕ್ ವಿರುದ್ಧ ಸೆಣಸಾಡುವಾಗಲೆಲ್ಲಾ ಕೊಹ್ಲಿ-ಅಮೀರ್ ನಡುವಿನ ಸೆಣಸಾಟ ರೋಚಕವಾಗಿರುತ್ತದೆ. ಇದೀಗ ಕೊಹ್ಲಿ ಕ್ರಿಕೆಟ್ ಸ್ಪೂರ್ತಿ ಪ್ರಶಸ್ತಿ ಪಡೆದಿದ್ದರ ಬಗ್ಗೆ ಅಮೀರ್ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯಾ ವಿರುದ್ಧ ಪಂದ್ಯವಾಡುವಾಗ ಸ್ಟೀವ್ ಸ್ಮಿತ್ ಗೆ ಭಾರತೀಯ ಪ್ರೇಕ್ಷಕರು ಮೂದಲಿಸಿದ್ದಕ್ಕೆ ಕೊಹ್ಲಿ ಪ್ರೇಕ್ಷಕರನ್ನು ಸುಮ್ಮನಾಗಿಸಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ನಡೆದುಕೊಂಡ ರೀತಿ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು. ಪ್ರಶಸ್ತಿ ಸ್ವೀಕರಿಸಿದ ಬಳಿಕವೂ ಈ ಬಗ್ಗೆ ಮಾತನಾಡಿದ ಕೊಹ್ಲಿ ಒಬ್ಬ ವ್ಯಕ್ತಿಯ ಮಾನಸಿಕ ಸ್ಥಿತಿ ಆ ಸಂದರ್ಭದಲ್ಲಿ ಹೇಗಿರುತ್ತದೆ ಎಂದು ಅರ್ಥಮಾಡಿಕೊಳ್ಳಬೇಕು. ಅಂತಹ ಕಠಿಣ ಪರಿಸ್ಥಿತಿಯಿಂದ ಹೊರಬಂದ ಆಟಗಾರನ ಮೇಲೆ ಈ ರೀತಿ ಕಲ್ಲೆಯೆಸುವ ಕೆಲಸ ಮಾಡಬಾರದು ಎಂದಿದ್ದರು. ಕೊಹ್ಲಿಯ ಈ ಮಾತನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಅಮೀರ್ ಶ್ರೇಷ್ಠ ಆಟಗಾರನಿಂದ ಅತ್ಯುತ್ತಮ ಹೇಳಿಕೆ ಎಂದು ಪ್ರಶಂಸಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಪಂತ್ ಫಿಟ್: ವಿಕೆಟ್ ಕೀಪಿಂಗ್ ಕೆಲಸ ಕೆಎಲ್ ರಾಹುಲ್ ಕೈತಪ್ಪುತ್ತಾ?