Publish Date: Thu, 25 Apr 2019 (07:54 IST)
Updated Date: Thu, 25 Apr 2019 (07:56 IST)
ಬೆಂಗಳೂರು: ಆರ್ ಸಿಬಿ ತಂಡ ಸಂಕಷ್ಟದಲ್ಲಿರುವಾಗ ಅರ್ಧಕ್ಕೇ ಕೈ ಕೊಟ್ಟು ಮರಳುವುದು ನಾಚಿಕೆಗೇಡಿನ ಸಂಗತಿ ಎಂದು ಸ್ಟಾರ್ ಆಟಗಾರ ಮೊಯಿನ್ ಅಲಿ ಹೇಳಿದ್ದಾರೆ.
ಇಂಗ್ಲೆಂಡ್ ಆಟಗಾರ ಮೊಯಿನ್ ಅಲಿ ವಿಶ್ವಕಪ್ ಗೆ ತಯಾರಾಗಲು ರಾಷ್ಟ್ರೀಯ ತಂಡ ಕೂಡಿಕೊಳ್ಳಬೇಕಿದೆ. ಹೀಗಾಗಿ ಇದೀಗ ಐಪಿಎಲ್ ಅರ್ಧಕ್ಕೇ ಬಿಟ್ಟು ತಮ್ಮ ತವರಿಗೆ ಮರಳುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಆರ್ ಸಿಬಿ ಅರ್ಧಕ್ಕೇ ಕೈಕೊಡುವುದು, ಅದರಲ್ಲೂ ಮುಂದಿನ ಹಂತಕ್ಕೆ ಏರಲು ಅವಕಾಶಗಳು ಕಡಿಮೆಯಿರುವಾಗ ತಂಡ ಬಿಡುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ. ಆದರೂ ಅನಿವಾರ್ಯವಾಗಿ ತೆರಳಲೇಬೇಕಿದೆ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ