Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾದಲ್ಲಿ ಈಗ ಯುವಕರು ಹೀರೋ, ಅನುಭವಿಗಳು ಜೀರೋ

ಟೀಂ ಇಂಡಿಯಾ
ಚೆನ್ನೈ , ಮಂಗಳವಾರ, 9 ಫೆಬ್ರವರಿ 2021 (09:50 IST)
ಚೆನ್ನೈ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಬಳಿಕ ಟೀಂ ಇಂಡಿಯಾದಲ್ಲಿ ಈಗ ಯುವ ಬ್ಯಾಟ್ಸ್ ಮನ್, ಬೌಲರ್ ಗಳೇ ಹೀರೋಗಳು. ಅನುಭವಿಗಳಿಗಿಂತ ತಂಡಕ್ಕೆ ನೆರವಾಗುತ್ತಿರುವುದು ಯುವ ಕ್ರಿಕೆಟಿಗರೇ.


ಆಸ್ಟ್ರೇಲಿಯಾ ಸರಣಿಯ ಮೂಲಕ ಭಾರತ ತಂಡಕ್ಕೆ ಮೊಹಮ್ಮದ್ ಸಿರಾಜ್, ಶಬ್ನಂ ಗಿಲ್, ವಾಷಿಂಗ್ಟನ್ ಸುಂದರ್ ಮುಂತಾದ ಯುವ ಕ್ರಿಕೆಟಿಗರನ್ನು ಕಂಡುಕೊಂಡಿದೆ. ಈ ಯುವ ಕ್ರಿಕೆಟಿಗರೇ ಈಗ ಅನುಭವಿಗಳಿಗಿಂತ ಚೆನ್ನಾಗಿ ಟೀಂ ಇಂಡಿಯಾವನ್ನು ಕಷ್ಟದ ಪರಿಸ್ಥಿತಿಯಿಂದ ಪಾರು ಮಾಡುತ್ತಿದ್ದಾರೆ. ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ಭಾರತಕ್ಕೆ ಆಪತ್ಬಾಂಧವರಾಗಿದ್ದು ಇವರೇ. ವಿಪರ್ಯಾಸವೆಂದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ತಮ್ಮ ಖ್ಯಾತಿ ತಕ್ಕ ಆಟವಾಡಿ ಎಷ್ಟೋ ದಿನಗಳಾಗಿವೆ. ಹೀಗಾಗಿ ಸದ್ಯಕ್ಕೆ ಭಾರತ ತಂಡಕ್ಕೆ ಅನುಭವಿಗಳು ಜೀರೋ ಆದರೆ, ಅನನುಭವಿಗಳೇ ಹೀರೋ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್, ಅಕ್ಷಯ್ ಕುಮಾರ್ ಟ್ವೀಟ್ ತನಿಖೆ ಮಾಡಲು ಮುಂದಾದ ಮಹಾ ಸರ್ಕಾರ