Publish Date: Thu, 09 Sep 2021 (10:10 IST)
Updated Date: Thu, 09 Sep 2021 (10:20 IST)
ಮುಂಬೈ: ಟಿ20 ವಿಶ್ವಕಪ್ ಗೆ ಪ್ರಕಟಿಸಲಾದ ಟೀಂ ಇಂಡಿಯಾಗೆ ಮೆಂಟರ್ ಆಗಿ ಧೋನಿ ಕಾರ್ಯನಿರ್ವಹಿಸಲಿರುವ ಸುದ್ದಿಗಳಿಗೆ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದಾರೆ.
ಧೋನಿ ಜೊತೆಗೆ ರವಿಶಾಸ್ತ್ರಿ ಕೂಡಾ ಮುಖ್ಯ ಕೋಚ್ ಆಗಿ ತಂಡದಲ್ಲಿರಲಿದ್ದಾರೆ. ಹೀಗಾಗಿ ಇವರ ಮಧ್ಯೆ ಯಾವುದೇ ಸಂಘರ್ಷಗಳಾಗದೇ ಇರಲಿ ಎಂದು ಗವಾಸ್ಕರ್ ಹೇಳಿದ್ದಾರೆ.
ಧೋನಿ ಹಾಗೂ ರವಿಶಾಸ್ತ್ರಿ ನಡುವೆ ಇದುವರೆಗೆ ಹೊಂದಾಣಿಕೆಯಿತ್ತು. ಹೀಗಾಗಿ ಇಬ್ಬರ ನಡುವೆ ಯಾವುದೇ ಸಂಘರ್ಷಗಳು ಬರದೇ ಇರಲಿ ಎಂದು ಗವಾಸ್ಕರ್ ಹೇಳಿದ್ದಾರೆ. ಇವರಿಬ್ಬರ ಅನುಭವ ಟೀಂ ಇಂಡಿಯಾಕ್ಕೆ ಲಾಭವಾಗಲಿದೆ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.