Select Your Language

Notifications

webdunia
webdunia
webdunia
webdunia

ರಣಜಿ ಫೈನಲ್ ನಲ್ಲಿ ಶ್ರೇಯಸ್ ಅಯ್ಯರ್ ಆಟ ನೋಡಲು ಬಂದ ರೋಹಿತ್ ಶರ್ಮಾ

Rohit Sharma

Krishnaveni K

ಮುಂಬೈ , ಬುಧವಾರ, 13 ಮಾರ್ಚ್ 2024 (14:46 IST)
ಮುಂಬೈ: ರಣಜಿ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಮುಂಬೈ ಮತ್ತು ವಿದರ್ಭ ಎದುರಾಳಿಯಾಗಿದ್ದು, ಮುಂಬೈ ಗೆಲುವಿನಂಚಿಗೆ ತಲುಪಿದೆ. ಈ ಪಂದ್ಯ ವೀಕ್ಷಿಸಲು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಂದಿದ್ದಾರೆ.

ಟೀಂ ಇಂಡಿಯಾ ಗುತ್ತಿಗೆಯಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ ಇದೀಗ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ಪರ  ಆಡುತ್ತಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ವಿಫಲರಾಗಿದ್ದ ಅವರು ಎರಡನೇ ಇನಿಂಗ್ಸ್ ನಲ್ಲಿ 95 ರನ್ ಗಳಿಸಿದ್ದರು. ಈ ಮೂಲಕ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ.

ಶ್ರೇಯಸ್ ಆಡುವುದನ್ನು ನೋಡಲು ಸ್ವತಃ ರೋಹಿತ್ ಶರ್ಮಾ ಮೈದಾನಕ್ಕೆ ಬಂದಿದ್ದಾರೆ. ಶ್ರೇಯಸ್ ಮೈದಾನದಲ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ರೋಹಿತ್ ಶರ್ಮಾ ಮುಂಬೈ ನಾಯಕ ಅಜಿಂಕ್ಯಾ ರೆಹಾನೆ ಜೊತೆ ಕುಳಿತು ಆಟದ ಬಗ್ಗೆ ವಿಶ್ಲೇಷಣೆ ನಡೆಸುತ್ತಿದ್ದ ದೃಶ್ಯ ಕಂಡುಬಂದಿದೆ.

ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧ 4-1 ಅಂತರದಿಂದ ಟೆಸ್ಟ್ ಸರಣಿ ಗೆದ್ದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಿರು ಬ್ರೇಕ್ ನಲ್ಲಿದ್ದಾರೆ. ಇನ್ನೀಗ ರೋಹಿತ್ ಶರ್ಮಾ ಐಪಿಎಲ್ ಆಡಲು ಮುಂಬೈ ಇಂಡಿಯನ್ಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇದಕ್ಕೆ ಮೊದಲು ಅವರು ರಣಜಿ ಫೈನಲ್ ವೀಕ್ಷಿಸಲು ಬಂದಿದ್ದು ವಿಶೇಷವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿ ಹೇಳಿದ್ದು ನಿಮಗೆ ಅರ್ಥವಾಯ್ತಾ? ಆರ್ ಸಿಬಿಗೆ ಬರ್ತಿದೆ ಹೊಸ ಹೆಸರು!