Select Your Language

Notifications

webdunia
webdunia
webdunia
Tuesday, 1 April 2025
webdunia

ರೋಹಿತ್ ಶರ್ಮಾ ಎಚ್ಚರಿಕೆಯಿಂದ ಸರ್ಫರಾಜ್ ಖಾನ್ ಪ್ರಾಣ ಉಳಿಯಿತು!

Sarfaraz Khan

Krishnaveni K

ಧರ್ಮಶಾಲಾ , ಭಾನುವಾರ, 10 ಮಾರ್ಚ್ 2024 (12:05 IST)
Photo Courtesy: Twitter
ಧರ್ಮಶಾಲಾ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನೀಡಿದ್ದ ಎಚ್ಚರಿಕೆಯೊಂದು ಯುವ ಆಟಗಾರ ಸರ್ಫರಾಜ್ ಖಾನ್ ಪ್ರಾಣ ಉಳಿಸಿದೆ.

ರಾಂಚಿ ಟೆಸ್ಟ್ ಪಂದ್ಯದ ವೇಳೆ ಕ್ರೀಸ್ ಸಮೀಪ ಫೀಲ್ಡಿಂಗ್ ಮಾಡುವಾಗ ಸರ್ಫರಾಜ್ ಖಾನ್ ಹೆಲ್ಮೆಟ್ ಧರಿಸದೇ ಫೀಲ್ಡಿಂಗ್ ಮಾಡಲೆತ್ನಿಸಿದ್ದರು. ಈ ವೇಳೆ ರೋಹಿತ್ ಬೈದು, ಹೀರೋ ಆಗಲು ಹೋಗಬೇಡ, ಮೊದಲು ಹೆಲ್ಮೆಟ್ ಹಾಕು ಎಂದು ಗದರಿದ್ದರು. ಕ್ರೀಸ್ ಗೆ ಸಮೀಪ ಹೆಲ್ಮೆಟ್ ಹಾಕದೇ ಫೀಲ್ಡಿಂಗ್ ಮಾಡುವುದು ಅತ್ಯಂತ ಅಪಾಯಕಾರಿ. ಚೆಂಡು ಬಡಿದು ಪ್ರಾಣಕ್ಕೇ ಎರವಾಗುವ ಅಪಾಯವಿದೆ.

ಹೀಗಾಗಿ ರೋಹಿತ್ ಹಿರಿಯಣ್ಣನಂತೇ ಸರ್ಫರಾಜ್ ಖಾನ್ ಗೆ ಬೈದು ಬುದ್ದಿ ಹೇಳಿದ್ದರು. ಅದು ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ನಿಜವಾಗಿದೆ. ರೋಹಿತ್ ಅಂದು ಮಾಡಿದ ಎಚ್ಚರಿಕೆಯಿಂದ ಸರ್ಫರಾಜ್ ಹೆಲ್ಮೆಟ್ ಹಾಕಿಯೇ ಇಲ್ಲಿ ಫೀಲ್ಡಿಂಗ್ ಮಾಡಿದ್ದರು. ಹೀಗಾಗಿ ಅವರ ಪ್ರಾಣ ಉಳಿದಿದೆ.

ಕುಲದೀಪ್ ಯಾದವ್ ಬೌಲಿಂಗ್ ಗೆ ಇಂಗ್ಲೆಂಡ್ ನ ಶೊಯೇಬ್ ಬಾಶಿರ್ ಹೊಡೆದ ಚೆಂಡು ಕ್ರೀಸ್ ಸಮೀಪದಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ ಸರ್ಫರಾಜ್ ಖಾನ್ ಗೆ ಹೆಲ್ಮೆಟ್ ಗೆ ಬಡಿದಿತ್ತು. ಒಂದು ವೇಳೆ ಅವರು ಆ ಕ್ಷಣದಲ್ಲಿ ಹೆಲ್ಮೆಟ್ ಹಾಕಿರದೇ ಇದ್ದಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು ಎಂದು ಊಹಿಸಲೂ ಅಸಾಧ್ಯ. ಹೀಗಾಗಿ ಕ್ರೀಸ್ ಸಮೀಪವಿದ್ದಾಗ ಹೆಲ್ಮೆಟ್ ಹಾಕಬೇಕು ಎಂದು ರೋಹಿತ್ ಹೇಳಿದ್ದ ಬುದ್ಧಿವಾದ ಸರ್ಫರಾಜ್ ಪ್ರಾಣ ಉಳಿಸಿತು ಎನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ನಿವೃತ್ತಿ ದಿನ ಯಾವಾಗ ಎಂದು ಘೋಷಿಸಿದ ರೋಹಿತ್ ಶರ್ಮಾ