Publish Date: Tue, 20 Mar 2018 (09:59 IST)
Updated Date: Tue, 20 Mar 2018 (10:01 IST)
ಕೊಲೊಂಬೋ: ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಅಂತಿಮ ಎಸೆತದಲ್ಲಿ ದಿನೇಶ್ ಕಾರ್ತಿಕ್ ಸಿಕ್ಸರ್ ಸಿಡಿಸಿ ಭಾರತ ತಂಡಕ್ಕೆ ಗೆಲುವು ಕೊಡಿಸುವಾಗ ನಾಯಕ ರೋಹಿತ್ ಶರ್ಮಾ ಏನ್ಮಾಡ್ತಿದ್ದರು ಗೊತ್ತಾ?
ಭಾರತಕ್ಕೆ ಗೆಲುವಿಗೆ ಕೊನೆಯ ಎಸೆತದಲ್ಲಿ ಐದು ರನ್ ಬೇಕಾಗಿದ್ದಾಗ ಡಗ್ ಔಟ್ ನಲ್ಲಿದ್ದ ರೋಹಿತ್ ಶರ್ಮಾ ಎದ್ದು ಪೆವಿಲಿಯನ್ ಕಡೆಗೆ ನಡೆಯಲು ಹೊರಟಿದ್ದರು. ಒಂದು ವೇಳೆ ಕಾರ್ತಿಕ್ ಬೌಂಡರಿ ಗಳಿಸಿದ್ದರೆ ಟೀಂ ಇಂಡಿಯಾ ಸೂಪರ್ ಓವರ್ ಆಡಬೇಕಾಗಿತ್ತು.
ಸೂಪರ್ ಓವರ್ ನಲ್ಲಿ ಆರಂಭಿಕರು ಆಡಬೇಕು. ಹಾಗಾಗಿ ರೋಹಿತ್ ಪ್ಯಾಡ್ ಕಟ್ಟಿಕೊಂಡು ಸೂಪರ್ ಓವರ್ ಗೆ ಸಿದ್ಧತೆ ನಡೆಸಲು ಹೊರಟಿದ್ದರು. ಆದರೆ ಕಾರ್ತಿಕ್ ಸಿಕ್ಸರ್ ಸಿಡಿಸಿದ ಕಾರಣ ಅದರ ಅಗತ್ಯ ಬರಲಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ