Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಅವರಲ್ಲಿ ಕ್ಷಮೆ ಕೇಳಿದ್ದಾದರೂ ಯಾಕೆ?

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಅವರಲ್ಲಿ ಕ್ಷಮೆ ಕೇಳಿದ್ದಾದರೂ ಯಾಕೆ?
ಮುಂಬೈ , ಮಂಗಳವಾರ, 20 ಮಾರ್ಚ್ 2018 (06:22 IST)
ಮುಂಬೈ : ನಿದಾಸ್ ತ್ರಿಕೋನ ಟಿ20 ಸರಣಿಯಲ್ಲಿ ಬಾಂಗ್ಲಾ ದೇಶದ ವಿರುದ್ಧದ ಫೈನಲ್ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರು ಉತ್ತಮ ಪ್ರದರ್ಶನ  ನೀಡಿದ ಹಿನ್ನಲೆಯಲ್ಲಿ ಎಲ್ಲಾ ಸ್ಟಾರ್ ಗಳಂತೆ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಕೂಡ ದಿನೇಶ್ ಕಾರ್ತಿಕ್ ಅವರಿಗೆ ಟ್ವೀಟ್ ಮೂಲಕ ಶುಭ ಕೋರಿದ್ದು, ಆದರೆ ಮತ್ತೊಂದು ಟ್ವೀಟ್ ಮಾಡಿ ಅವರಲ್ಲಿ ಕ್ಷಮೆ ಕೇಳಿದ್ದಾರೆ.


ಅವರು ಈ ರೀತಿ ಮಾಡಲು ಕಾರಣವೆನೆಂದರೆ ಅವರು ಮೊದಲನೇಯ ಟ್ವೀಟ್ ಅನ್ನು ತಪ್ಪಾಗಿ ಟೈಪ್ ಮಾಡಿದ್ದರು. ಅಂದರೆ ಅವರು ಮೊದಲಬಾರಿ ಎರಡು ಓವರ್ ಗಳಲ್ಲಿ 24 ರನ್ ಗಳಿಸಬೇಕಿತ್ತು. ದಿನೇಶ್ ಕಾರ್ತಿಕ್ ಬ್ರಿಲಿಯಂಟ್ ನಾಕ್. ಒಂದು ಎಸೆತದಲ್ಲಿ 5 ರನ್ ಗಳಿಸಬೇಕಾದ ವೇಳೆ ಸಿಕ್ಸ್ ಸಿಡಿಸಿದ್ದಾರೆ. ನಿಮಗೇ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು. ಆದರೆ ಅವರು ಈ ಟ್ವೀಟ್ ನಲ್ಲಿ 34 ರನ್ ಬದಲಾಗಿ 24 ರನ್ ಎಂದು ಬರೆದಿದ್ದರು. ನಂತರ ತಾವು ಮಾಡಿರುವ ತಪ್ಪನ್ನು ತಿಳಿದು ಇನ್ನೊಂದು ಟ್ವೀಟ್ ಮೂಲಕ `ದಿನೇಶ್ ಕಾರ್ತಿಕ್ ಸಾರಿ’ ಎಂದು ಬರೆದಿದ್ದಾರೆ. ತಾವು ಮಾಡಿದ ಚಿಕ್ಕ ತಪ್ಪಿಗೆ ಕ್ಷಮೆ ಯಾಚಿಸಿದ ಅಮಿತಾಬ್ ಅವರ ಈ ಗುಣಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ಡಿಂಪಲ್ ದಿಗಂತ್ ಅವರ ಮದುವೆ ಯಾವಾಗ ಗೊತ್ತಾ?