Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ದಂಪತಿಯನ್ನು ಮಧುಚಂದ್ರಕ್ಕೆ ಆಹ್ವಾನಿಸಿದ ಈ ದೇಶದ ಅಧ್ಯಕ್ಷ!

ವಿರಾಟ್ ಕೊಹ್ಲಿ ದಂಪತಿಯನ್ನು ಮಧುಚಂದ್ರಕ್ಕೆ ಆಹ್ವಾನಿಸಿದ ಈ ದೇಶದ ಅಧ್ಯಕ್ಷ!
ಮುಂಬೈ , ಶನಿವಾರ, 17 ಮಾರ್ಚ್ 2018 (09:24 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಈಗಾಗಲೇ ಒಮ್ಮೆ ಮಧುಚಂದ್ರ ಮುಗಿಸಿ ಬಂದಿದ್ದಾರೆ. ಇದೀಗ ಬಿಡುವಿನ ವೇಳೆ ಕಳೆಯುತ್ತಿರುವ ಈ ಜೋಡಿಯನ್ನು ಸೆಕೆಂಡ್ ಹನಿಮೂನ್ ಮಾಡಲು ನಮ್ಮ ದೇಶಕ್ಕೆ ಬನ್ನಿ ಎಂದು ಶ್ರೀಲಂಕಾ ಅಧ್ಯಕ್ಷ ದಯಸಿರಿ ಜಯಸೇಖರೆ ಆಹ್ವಾನಿಸಿದ್ದಾರೆ.

ನಾನು ಕೊಹ್ಲಿಯನ್ನು ಕ್ರಿಕೆಟ್ ಆಡಲು ಇಲ್ಲಿಗೆ ಬನ್ನಿ ಎಂದು ಆಹ್ವಾನಿಸುವುದಿಲ್ಲ. ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಾರೊಂದಿಗೆ ಇಲ್ಲಿಗೆ ಬಂದು ಕೆಲವು ದಿನ ಆರಾಮವಾಗಿ ಸುತ್ತಾಡಲಿ ಎಂದು ಆಹ್ವಾನಿಸುತ್ತೇನೆ ಎಂದು ಶ್ರೀಲಂಕಾ ಅಧ್ಯಕ್ಷರು ಆಹ್ವಾನವಿತ್ತಿದ್ದಾರೆ.

ಹೇಗೂ ಸದ್ಯಕ್ಕೆ ರಜಾ ಮಜಾ ಅನುಭವಿಸುತ್ತಿರುವ ಜೋಡಿ. ಯಾಕೆ ಲಂಕಾ ದ್ವೀಪ ರಾಷ್ಟ್ರದಲ್ಲಿ ಕಳೆಯಬಾರದು ಎಂದು ಯೋಚಿಸಿದರೂ ಯೋಚಿಸೀತು. ಐಪಿಎಲ್ ಶುರುವಾಗುವವರೆಗೆ ಹೇಗಿದ್ದರೂ ಕೊಹ್ಲಿ ಬಿಡುವಾಗಿದ್ದಾರೆ. ಈ ಬಿಡುವಿನ ವೇಳೆಯನ್ನು ಕಳೆಯಲು ದ್ವೀಪ ರಾಷ್ಟ್ರಕ್ಕೆ ಅಧಿಕೃತ ಆಹ್ವಾನವೇ ಸಿಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ            

Share this Story:

Follow Webdunia kannada

ಮುಂದಿನ ಸುದ್ದಿ

ಭಾನುವಾರದ ಫೈನಲ್ಸ್ ಗೆ ಮೊದಲು ಕೆಎಲ್ ರಾಹುಲ್ ಆಂಡ್ ಬಾಯ್ಸ್ ಕೂಲ್ ಮಾಡಿಕೊಂಡಿದ್ದು ಹೀಗೆ!