Select Your Language

Notifications

webdunia
webdunia
webdunia
webdunia

RCB vs PBKS Match: ಆರ್‌ಸಿಬಿ ಗೆದ್ದರೆ ಚಿಕನ್ ಪ್ರಿಯರಿಗೆ ಬಂಪರ್ ಆಫರ್ ಬಿಟ್ಟ ಕಟ್ಟಾ ಅಭಿಮಾನಿ

RCB vs PBKS ಪಂದ್ಯ

Sampriya

ಬೆಂಗಳೂರು , ಮಂಗಳವಾರ, 3 ಜೂನ್ 2025 (17:48 IST)
Photo Credit X
ಬೆಂಗಳೂರು: ಇಂದು ಎಲ್ಲರ ಬಾಯಲ್ಲೂ ಐಪಿಎಲ್‌ ಫೈನಲ್‌ನದ್ದೆ ಮಾತು. ವಿಶೇಷವಾಗಿ ಕರ್ನಾಟಕದಲ್ಲಿ ಇಂದು ಹಬ್ಬದ ವಾತಾವರಣ ಸೃಷ್ಟಿಯಾಗಿದೆ. 18 ವರ್ಷಗಳ ಕನಸ್ಸು ಈ ಬಾರಿಯಾದರೂ ನನಸಾಗಲಿ ಎಂಬುದು  ಆರ್‌ಸಿಬಿ ಅಭಿಮಾನಿಗಳ ದೊಡ್ಡ ಕೋರಿಕೆ. 

ಆರ್‌ಸಿಬಿ ಗೆಲುವಿಗಾಗಿ ಅಭಿಮಾನಿಗಳು ಈಗಾಗಲೇ ವಿಶೇಷ ಪೂಜೆಯನ್ನು ಮಾಡುತ್ತಿರುವುದನ್ನು ಕಾಣಬಹುದು. ಕೆಲವರು ಆರ್‌ಸಿಬಿ ಗೆದ್ದೇ ಗೆಲ್ಲುತ್ತದೆ ಎಂದು ಬೆಟ್ಟಿಂಗ್ ಕಟ್ಟಿದ್ದು ಇದೆ. 


ಇನ್ನೂ ಆರ್‌ಸಿಬಿ ಕಟ್ಟಾ ಅಭಿಮಾನಿಗಳು ಈ ಬಾರಿ ಕಪ್ ಗೆದ್ದರೆ ತಮ್ಮ ಕಡೆಯಿಂದ ವಿಶೇಷ ಉಡುಗೊರೆಯನ್ನು ಘೋಷಣೆ ಮಾಡಿರುವುದನ್ನು ಕಾಣಬಹುದು. ಸಾಮಾಜಿಕ ಜಾಲತಾಣದಲ್ಲಿ ಹಲವಾರ ಫನ್ನಿ ಫೋಸ್ಟ್‌ಗಳು ಹರಿದಾಡುತ್ತಿರುವುದನ್ನು ಕಾಣಬಹುದು.

ಇಲ್ಲೊಬ್ಬ ಆರ್‌ಸಿಬಿ ಪಕ್ಕಾ ಅಭಿಮಾನಿ ಈ ಬಾರಿ ಕಪ್ ಗೆದ್ದರೆ 1ಕೆಜಿಗೆ 1ಕೆಜಿ ಕೋಳಿ ಉಚಿತ ಎಂದು ಘೋಷಣೆ ಮಾಡಿದ್ದಾನೆ. 

ದೊಂಡೇರಂಗಡಿ ಗುರುದೇವ ಕಾಂಪ್ಲೆಕ್ಸ್‌ನ  ಬ್ರಹ್ಮಶ್ರೀ ಚಿಕನ್ ಸೆಂಟರ್‌ನ ಪ್ರದೀಪ್ ಶೆಟ್ಟಿ, ಐಪಿಎಲ್‌ ಪಂದ್ಯಾಟದಲ್ಲಿ ಆರ್‌ಸಿಬಿ ಜಯಶಾಲಿಯಾದರೆ 1ಕೆಜಿ ಕೋಳಿಗೆ 1ಕೆಜಿ ಕೋಳಿ ಉಚಿತ ಎಂದು ಘೋಷಣೆ ಮಾಡಿದ್ದಾರೆ. 

ಈ ಫೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

===

ಮ್ಮ ವ್ಯಾಪ್ತಿಯಲ್ಲಿ ಪದೇ ಪದೇ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಅಥವಾ ಕ್ರಿಮಿನಲ್ ಅಪರಾಧಗಳ ಹಿನ್ನೆಲೆಯುಳ್ಳ 36 ವ್ಯಕ್ತಿಗಳ ವಿರುದ್ಧ ಗಡಿಪಾರು ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಗಡಿಪಾರು ಮಾಡಲಾಗುತ್ತಿರುವ ವ್ಯಕ್ತಿಗಳು ಬಂಟ್ವಾಳ, ವಿಟ್ಲ, ಪುತ್ತೂರು ಪಟ್ಟಣ ಮತ್ತು ಗ್ರಾಮಾಂತರ, ಕಡಬ, ಸುಳ್ಯ, ಉಪ್ಪಿನಂಗಡಿ, ಪುಂಜಾಲಕಟ್ಟೆ ಮತ್ತು ಬೆಳ್ತಂಗಡಿ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದವರು ಎಂದು ಅವರು ಹೇಳಿದ್ದಾರೆ.

ಅಧಿಕಾರಿಗಳ ಪ್ರಕಾರ, ಪುನರಾವರ್ತಿತ ಅಪರಾಧಗಳ ಇತಿಹಾಸ ಹೊಂದಿರುವ ಮತ್ತು ಸಾರ್ವಜನಿಕ ಶಾಂತಿ ಹಾಗೂ ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ವಿರುದ್ಧ ತೀವ್ರ ಕ್ರಮ ಕೈಗೊಳ್ಳುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
15 ಮುಸ್ಲಿಮರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟು 36 ಜನರನ್ನು ಗಡಿಪಾರು ಮಾಡಲಾಗುತ್ತಿದೆ.

15 ಮುಸ್ಲಿಮರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಟ್ಟು 36 ಜನರನ್ನು ಗಡಿಪಾರು ಮಾಡಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

RCB vs PBKS: ನಾನು ಬೆಂಗಳೂರಿನ ಅಳಿಯ, so RCB is my team: ಶುಭಹಾರೈಸಿದ ಬ್ರಿಟಿಷ್ ಮಾಜಿ ಪ್ರಧಾನ ರಿಷಿ ಸುನಕ್