ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಾಟದಲ್ಲಿ ಆರ್ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್ ಟಾಸ್ ಗೆದ್ದಿದೆ. ನಾಯಕ ಶ್ರೇಯಸ್ ಅಯ್ಯರ್ ಅವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಮಳೆಯ ಹಿನ್ನೆಲೆ ಕೆಲ ಗಂಟೆ ಪಂದ್ಯಾಟ ವಿಳಂವವಾಯಿತು. ಈ ಹಿನ್ನೆಲೆ 20ಓವರ್ಗಳ ಪಂದ್ಯಾಟವನ್ನು 14ಓವರ್ಗಳಿಗೆ ಕಡಿತಗೊಳಿಸಲಾಗದೆ. ಮೂವರು ಬೌಲರ್ಗಳು ಗರಿಷ್ಠ ತಲಾ 4 ಓವರ್ಗಳನ್ನು ಮತ್ತು 1 ಬೌಲರ್ ಉಳಿದ 2 ಓವರ್ಗಳನ್ನು ಬೌಲ್ ಮಾಡಬಹುದು.
ಟಾಸ್ ನಡೆಸುವ ಮುನ್ನವೇ ತುಂತುರು ಮಳೆಯಿಂದ ನಿಗದಿಯಾದ ಸಮಯದಲ್ಲಿ ಪಂದ್ಯಾಟ ಆರಂಭಗೊಳ್ಳಲಿಲ್ಲ. ಉತ್ತಮ ಆರಂಭದೊಂದಿಗೆ ಐಪಿಎಲ್ 18ನೇ ಆವೃತ್ತಿಯನ್ನು ಆರಂಭಿಸಿದ ಆರ್ಸಿಬಿ 6 ಪಂದ್ಯಾಟಗಳಲ್ಲಿ ನಾಲ್ಕು ಗೆಲುವು ಸಾಧಿಸಿದೆ.
ತವರಿನಲ್ಲಿ ನಡೆದ ಎರಡು ಪಂದ್ಯಾಟಗಳಲ್ಲೂ ಆರ್ಸಿಬಿ ಸೋಲು ಅನುಭವಿಸಿತು. ಅಂತಿಮವಾಗಿ ತವರು ಮೈದಾನದಲ್ಲಿ ತಮ್ಮ ಸೋಲಿನ ಸರಣಿಯನ್ನು ಮುರಿಯಲು ಆಶಿಸುತ್ತಿರುವ ಆರ್ಸಿಬಿ, ಇದೀಗ ಗ್ರೌಂಡ್ಗೆ ಇಳಿದಿದೆ.