Digvesh Rathi: ಆರ್ ಸಿಬಿ ಕೆಡವಲು ಕಳ್ಳ ದಾರಿ ಹಿಡಿದು ಹೊಡೆಸಿಕೊಂಡ ದಿಗ್ವೇಶ್ ರಾಠಿ: ರಿಷಭ್ ಪಂತ್ ರಿಯಾಕ್ಷನ್ ವಿಡಿಯೋ ನೋಡಿ

Krishnaveni K
ಬುಧವಾರ, 28 ಮೇ 2025 (09:31 IST)
Photo Credit: X
ಲಕ್ನೋ: ಐಪಿಎಲ್ 2025 ರ ನಿನ್ನೆಯ ಆರ್ ಸಿಬಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಬೌಲರ್ ದಿಗ್ವೇಶ್ ರಾಠಿ ಕಳ್ಳ ದಾರಿ ಹಿಡಿಯಲು ಹೋಗಿ ತಾವೇ ಹೊಡೆಸಿಕೊಂಡಿದ್ದಾರೆ. ದಿಗ್ವೇಶ್ ವರ್ತನೆಗೆ ಲಕ್ನೋ ನಾಯಕ ರಿಷಭ್ ಪಂತ್ ತಲೆ ತಗ್ಗಿಸುವಂತಾಗಿದೆ.

ಕೊನೆಯ ಎರಡು ಓವರ್ ರೋಚಕವಾಗಿತ್ತು. ಆರ್ ಸಿಬಿ ಗೆಲುವಿನ ರನ್ ಗೂ ಬಾಲ್ ಗೂ 10 ಹೆಜ್ಜೆಯ ದೂರವಿತ್ತು. 17 ನೇ ಓವರ್ ಬಾಲ್ ಮಾಡಲು ಬಂದಿದ್ದು ದಿಗ್ವೇಶ್ ರಾಠಿ. ಆರನೇ ಎಸೆತವನ್ನು ದಿಗ್ವೇಶ್ ಬಾಲ್ ಮಾಡಲು ಹೊರಟಿದ್ದರು. ಕ್ರೀಸ್ ಕೂಡಾ ದಾಟಿದ್ದರು. ನಾನ್ ಸ್ಟ್ರೈಕರ್ ಎಂಡ್ ಬಿಟ್ಟಿದ್ದ ಜಿತೇಶ್ ಶರ್ಮಾ ಕ್ರೀಸ್ ಬಿಟ್ಟಿದ್ದರು. ಇದನ್ನು ಗಮನಿಸಿ ಜಿತೇಶ್ ಬಾಲ್ ಬ್ಯಾಟರ್ ಗೆ ಎಸೆಯದೇ ಬೇಲ್ ಎಗರಿಸಿ ರನೌಟ್ ಗೆ ಅಪೀಲ್ ಮಾಡಿದರು. ಅಂಪಾಯರ್ ಕೂಡಾ ಥರ್ಡ್ ಅಂಪಾಯರ್ ಗೆ ರಿವ್ಯೂ ನೀಡಿದರು.

ಈ ವೇಳೆ ದಿಗ್ವೇಶ್ ಕೂಡಾ ಕ್ರೀಸ್ ದಾಟಿದ ಬಳಿಕ ಬೇಲ್ ಎಗರಿಸಿದ್ದರು ಎನ್ನುವುದು ಪಕ್ಕಾ ಆಗಿ ಜಿತೇಶ್ ನಾಟೌಟ್ ಆಗಿ ಉಳಿದುಕೊಂಡರು. ದಿಗ್ವೇಶ್ ಕಳ್ಳ ದಾರಿ ಹಿಡಿದಿದ್ದಕ್ಕೆ ಸ್ವತಃ ರಿಷಭ್ ಪಂತ್ ಬೇಸರಗೊಂಡರು. ಬಳಿಕ ಸ್ವತಃ ಜಿತೇಶ್ ಅವರನ್ನು ಅಪ್ಪಿ ಸಮಾಧಾನಿಸಿದರು.  ಈ ವಿಡಿಯೋ ಈಗ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಎರಡನೇ ಟೆಸ್ಟ್ ಗೆ ಶುಭಮನ್ ಗಿಲ್ ಇಲ್ಲ, ಟೀಂ ಇಂಡಿಯಾಗೆ ಇವರೇ ನಾಯಕ

IND vs SA: ಅಬ್ಬಬ್ಬಾ ಲಾಟರಿ..ಕನ್ನಡಿಗನಿಗೆ ಮತ್ತೆ ಟೀಂ ಇಂಡಿಯಾ ನಾಯಕತ್ವ

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಮುಂದಿನ ಸುದ್ದಿ
Show comments