ಏಷ್ಯಾ ಕಪ್ ಬಹಿಷ್ಕರಿಸ್ತೀನಿ ಎಂದಿದ್ದ ಪಾಕಿಸ್ತಾನಕ್ಕೆ ಶುರುವಾಗಿತ್ತು ಜಯ್ ಶಾ ಭಯ

Krishnaveni K
ಬುಧವಾರ, 17 ಸೆಪ್ಟಂಬರ್ 2025 (10:00 IST)
ಕರಾಚಿ: ಮ್ಯಾಚ್ ರೆಫರಿಯನ್ನು ಕಿತ್ತು ಹಾಕದಿದ್ದರೆ ಏಷ್ಯಾ ಕಪ್ ಬಹಿಷ್ಕರಿಸ್ತೀವಿ ಎಂದಿದ್ದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಂತರ ತಣ್ಣಗಾಗಿತ್ತು. ಇದಕ್ಕೆ ಕಾರಣ ಜಯ್ ಶಾ ಎನ್ನಲಾಗಿದೆ.

ಏಷ್ಯಾ ಕಪ್ ನಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಅವರು ಕೈ ಕುಲುಕದೇ ನಮಗೆ ಅವಮಾನ ಮಾಡಿದ್ದಾರೆ ಎಂದು ಸಿಟ್ಟಿಗೆದ್ದಿದ್ದ ಪಾಕಿಸ್ತಾನ ಹೀಗೆ ಮಾಡಲು ಹೇಳಿದ್ದೇ ಮ್ಯಾಚ್ ರೆಫರಿ. ಅವರನ್ನು ಕಿತ್ತು ಹಾಕದಿದ್ದರೆ ಏಷ್ಯಾ ಕಪ್ ಕೂಟದಿಂದಲೇ ಹೊರ ನಡೆಯುತ್ತೇವೆ ಎಂದು ವೀರಾ ವೇಷದ ಮಾತನಾಡಿ ಕೊನೆಗೆ ತಣ್ಣಗಾಗಿತ್ತು.

ಇದಕ್ಕೆ ಕಾರಣ ಜಯ್ ಶಾ ಭಯ ಎನ್ನಲಾಗಿದೆ. ಭಾರತದ ಜಯ್ ಶಾ ಐಸಿಸಿ ಮುಖ್ಯಸ್ಥರು. ಒಂದು ವೇಳೆ ಪಾಕಿಸ್ತಾನ ಏಷ್ಯಾ ಕಪ್ ನಿಂದ ಹೊರ ನಡೆದರೆ ಜಯ್ ಶಾ ದೊಡ್ಡ ಮೊತ್ತದ ದಂಡ ಕಟ್ಟಲು ಸೂಚಿಸುತ್ತಿದ್ದರು. ಇದನ್ನು ಭರಿಸುವಷ್ಟು ಆರ್ಥಿಕವಾಗಿ ಪಾಕ್ ಮಂಡಳಿ ಸಮರ್ಥವಾಗಿಲ್ಲ.

ಹೀಗಾಗಿ ಈ ರಗಳೆಯೇ ಬೇಡ ಎಂದು ಕೂಟ ಬಹಿಷ್ಕರಿಸುವ ಬೆದರಿಕೆಯಿಂದ ಹಿಂದೆ ಸರಿದಿದೆ. ಆದರೆ ಪತ್ರಿಕಾಗೋಷ್ಠಿ ಬಹಿಷ್ಕಾರ, ಪ್ರಶಸ್ತಿ ಸಮಾರಂಭಕ್ಕೆ ಗೈರಾಗುವ ಮೂಲಕ ತನ್ನ ಪ್ರತಿಭಟನೆ ವ್ಯಕ್ತಪಡಿಸುತ್ತಿದೆ. ಆದರೆ ಇದಕ್ಕೆ ಯಾರೂ ಕ್ಯಾರೇ ಎನ್ನುತ್ತಿಲ್ಲ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಐಪಿಎಲ್ ನಲ್ಲಿ ಮಾಲಿಕರು ಏನೇನೋ ಪ್ರಶ್ನೆ ಕೇಳ್ತಾರೆ: ಕೆಎಲ್ ರಾಹುಲ್ ಬಿಚ್ಚಿಟ್ಟ ಸತ್ಯ

ಟೀಂ ಇಂಡಿಯಾ ಟೆಸ್ಟ್ ತಂಡ ಹಳ್ಳ ಹಿಡಿಸಿದ ಗೌತಮ್ ಗಂಭೀರ್ ಟೆಸ್ಟ್ ದಾಖಲೆ ಹೇಗಿತ್ತು ನೋಡಿ

IND vs SA: ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಯಾವಾಗ, ಎಲ್ಲಿ ಇಲ್ಲಿದೆ ವಿವರ

ಕೋಚ್ ಆಗಿ ಬಂದಾಗ ರಾಹುಲ್ ದ್ರಾವಿಡ್ ಹೇಳಿದ್ದ ಈ ಮಾತು ಗಂಭೀರ್ ಗೂ ಪಾಠವಾಗಬೇಕು

ಮುಂದಿನ ಸುದ್ದಿ
Show comments