Select Your Language

Notifications

webdunia
webdunia
webdunia
webdunia

ತಂಡದಿಂದ ರವಿಚಂದ್ರನ್ ಅಶ್ವಿನ್ ಹೊರಹೋಗಲು ನಾನು, ಚಾಹಲ್ ಕಾರಣರಲ್ಲ ಎಂದ ಕುಲದೀಪ್ ಯಾದವ್

ತಂಡದಿಂದ ರವಿಚಂದ್ರನ್ ಅಶ್ವಿನ್ ಹೊರಹೋಗಲು ನಾನು, ಚಾಹಲ್ ಕಾರಣರಲ್ಲ ಎಂದ ಕುಲದೀಪ್ ಯಾದವ್
ಮುಂಬೈ , ಮಂಗಳವಾರ, 5 ಮಾರ್ಚ್ 2019 (09:24 IST)
ಮುಂಬೈ: ಟೀಂ ಇಂಡಿಯಾದಲ್ಲಿ ಯುವ ಸ್ಪಿನ್ನರ್ ಗಳಾದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಮಿಂಚಲು ತೊಡಗಿದ ಮೇಲೆ ಸೀಮಿತ ಓವರ್ ಗಳ ಪಂದ್ಯದಿಂದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ರನ್ನು ಸಂಪೂರ್ಣವಾಗಿ ಹೊರಗಿಡಲಾಗಿದೆ.


ಆದರೆ ಇದಕ್ಕೆ ನಾವಿಬ್ಬರೂ ಕಾರಣರಲ್ಲ ಎಂದು ಸ್ಪಿನ್ನರ್ ಕುಲದೀಪ್ ಯಾದವ್ ಹೇಳಿಕೊಂಡಿದ್ದಾರೆ. ರವೀಂದ್ರ ಜಡೇಜಾ ಮತ್ತು ಅಶ್ವಿನ್ ಹೊರಹೋಗಲು ನಾವು ಕಾರಣರಲ್ಲ. ಬದಲಾಗಿ ನಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದೇವಷ್ಟೇ ಎಂದು ಸಂದರ್ಶನವೊಂದರಲ್ಲಿ ಕುಲದೀಪ್ ಹೇಳಿಕೊಂಡಿದ್ದಾರೆ.

ಇದೀಗ ವಿಶ್ವಕಪ್ ತಂಡದಲ್ಲೂ ಅಶ್ವಿನ್ ಗೆ ಸ್ಥಾನ ಸಿಗುವುದು ಅನುಮಾನವಾಗಿದೆ. ‘ನಾವ್ಯಾರನ್ನೂ ಹೊರಕಳಿಸಿಲ್ಲ. ನಮಗೆ ಸಿಕ್ಕ ಅವಕಾಶ ಬಳಸಿಕೊಂಡಿದ್ದೇವೆ. ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಮತ್ತು ಜಡೇಜಾ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ನಾವು ಅವರಿಂದ ಸಾಕಷ್ಟು ಕಲಿತಿದ್ದೇವೆ’ ಎಂದು ಕುಲದೀಪ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಆಸ್ಟ್ರೇಲಿಯಾ ದ್ವಿತೀಯ ಏಕದಿನ: ನಾಗ್ಪುರದಲ್ಲಿ ಧೋನಿಯೇ ಕಿಂಗ್!