Webdunia - Bharat's app for daily news and videos

Install App

ತುಳುನಾಡಿನ ಮಗ ಕೆಎಲ್ ರಾಹುಲ್ ಮೈದಾನದಲ್ಲೇ ಕಾಂತಾರ ಪಿಕ್ಚರ್ ತೋರಿಸಿದ್ರು

Sampriya
ಶುಕ್ರವಾರ, 11 ಏಪ್ರಿಲ್ 2025 (18:21 IST)
Photo Courtesy X
ಬೆಂಗಳೂರು:  ಆರ್‌ಸಿಬಿ ವಿರುದ್ಧದ ಪಂದ್ಯಾಟದಲ್ಲಿ ಗೆಲುವು ಸಾಧಿಸಿದ ಬಳಿಕ ತುಳುನಾಡಿನ ಮಗ ಕೆಎಲ್ ರಾಹುಲ್ ಮೈದಾನದಲ್ಲೇ ಕಾಂತಾರ ಪಿಕ್ಚರ್ ತೋರಿಸಿದ್ರು.

ಆರ್‌ಸಿಬಿಯನ್ನು ಮಣಿಸಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕುವ ಮೂಲಕ ಕಾಂತಾರ ಸಿನಿಮಾದ ದೃಶ್ಯವನ್ನು ಕೆಎಲ್ ರಾಹುಲ್ ಕ್ರಿಯೇಟ್ ಮಾಡಿದ ಹಾಗಿತ್ತು.

ಇನ್ನು ತಮ್ಮ ಅಕ್ರಮಣಕಾರಿ ಮತ್ತು ಭಾವುಕ ಸೆಲೆಬ್ರೇಷನ್ ಕುರಿತು ಪಂದ್ಯದ ಬಳಿಕ ಮಾತನಾಡಿರುವ ಕೆಎಲ್ ರಾಹುಲ್, ಇದು ನನ್ನ ಸೆಲೆಬ್ರೇಷನ್ ಅಲ್ಲ. ನನ್ನ ಫೇವರಿಟ್ ಚಿತ್ರ ಕಾಂತಾರಾದಲ್ಲಿ ಬರುವ ಒಂದು ಸನ್ನಿವೇಶದ್ದು ಎಂದು ಹೇಳಿದ್ದಾರೆ. ಚಿತ್ರಗಳಲ್ಲಿ ನನಗೆ ಕಾಂತಾರಾ ಫೇವರಿಟ್ ಚಿತ್ರವಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣ ನನ್ನ ವಿಶೇಷ ಸ್ಥಳವಾಗಿದೆ. ಹೀಗಾಗಿ ಅಲ್ಲಿ ನನ್ನ ಉತ್ತಮ ಪ್ರದರ್ಶನ ವಿಶೇಷವಾಗಿದೆ. ಈ ಸ್ಥಳ ಎಷ್ಟು ವಿಶೇಷ ಎಂಬುದನ್ನು ತೋರಿಸಲು ನಾನು ಆ ರೀತಿ ಸೆಲೆಬ್ರೇಟ್ ಮಾಡಿದೆ. ಇದು ನಾನು ಆಡಿ ಬೆಳೆದ ವಿಶೇಷ ಸ್ಥಳ. ಇದು ನನ್ನ ಗ್ರೌಂಡ್ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ.

ಇನ್ನೂ ಒಂದು ರನ್‌ ಬಾಕಿ ಇರುವಂತೆ ಸಿಕ್ಸ್ ಬಾರಿಸಿ ಡೆಲ್ಲಿ ಕ್ಯಾಪಿಟಲ್ಸ್‌ ಗೆಲುವಿಗೆ ಕನ್ನಡಿಗ ಕೆಎಲ್ ರಾಹುಲ್‌ ಪ್ರಮುಖ ಕಾರಣರಾದರು.  

ಹೆಲ್ಮೆಟ್ ತೆಗೆದು, ತನ್ನ ಬ್ಯಾಟ್‌ನಿಂದ ವೃತ್ತವನ್ನು ಎಳೆದು, ಅದನ್ನು ನೆಲಕ್ಕೆ ಬಡಿದು, ಇದು ನನ್ನ ನೆಲ ಎಂದು ಎದೆ ಮುಟ್ಟಿ ತೋರಿಸಿದರು.  ಯಾವುದೇ ಪದಗಳನ್ನು ಬಳಸದೆ ಕೆಎಲ್ ರಾಹುಲ್ ತಮ್ಮ ಸನ್ನೆ ಮೂಲಕನೇ ಆರ್‌ಸಿಬಿ ಪ್ರಾಂಚೈಸಿಗೆ ತಿರುಗೇಟು ನೀಡಿದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments