Publish Date: Thu, 08 Sep 2022 (19:06 IST)
Updated Date: Thu, 08 Sep 2022 (19:08 IST)
ದುಬೈ: ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಔಪಚಾರಿಕ ಸೂಪರ್ ಫೋರ್ ಪಂದ್ಯವಾಡುತ್ತಿರುವ ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿದೆ.
ಕಳೆದ ಎರಡು ಸೂಪರ್ ಫೋರ್ ಪಂದ್ಯ ಸೋತಿರುವ ಕಾರಣ ಟೀಂ ಇಂಡಿಯಾ ಏಷ್ಯಾ ಕಪ್ ನಿಂದ ಹೊರಬಿದ್ದಿದೆ. ಇದೀಗ ಔಪಚಾರಿಕವಾಗಿ ಕೊನೆಯ ಪಂದ್ಯವಾಡುತ್ತಿದೆ. ಇಲ್ಲಿ ಟಾಸ್ ಗೆದ್ದವರೇ ಗೆಲುವು ಕಾಣುತ್ತಿರುವುದು ವಿಶೇಷ.
ವಿಶೇಷವೆಂದರೆ ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದು, ಅವರ ಸ್ಥಾನದಲ್ಲಿ ಕೆಎಲ್ ರಾಹುಲ್ ತಂಡದ ನಾಯಕತ್ವ ವಹಿಸಿದ್ದಾರೆ. ರೋಹಿತ್ ಮಾತ್ರವಲ್ಲದೆ, ಪ್ರಮುಖ ಆಟಗಾರರಾದ ಯಜುವೇಂದ್ರ ಚಾಹಲ್, ಹಾರ್ದಿಕ್ ಪಾಂಡ್ಯಗೂ ವಿಶ್ರಾಂತಿ ನೀಡಲಾಗಿದೆ. ಅವರ ಸ್ಥಾನಕ್ಕೆ ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್, ದೀಪಕ್ ಚಹರ್ ಗೆ ಸ್ಥಾನ ನೀಡಲಾಗಿದೆ.