Publish Date: Fri, 12 Nov 2021 (15:28 IST)
Updated Date: Fri, 12 Nov 2021 (15:31 IST)
ನ್ಯೂಜಿಲೆಂಡ್ ವಿರುದ್ದದ ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. 16 ಸದಸ್ಯರ ಬಳಗದಲ್ಲಿ ಯುವ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಕೂಡ ಸ್ಥಾನ ಪಡೆದಿದ್ದಾರೆ.
ಆದ್ರೆ ಅಯ್ಯರ್ ಆಯ್ಕೆ ಬಗ್ಗೆ ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಪ್ರಶ್ನೆ ಮಾಡಿದ್ದಾರೆ. ನನ್ನ ಪ್ರಕಾರ ವೆಂಕಟೇಶ್ ಅಯ್ಯರ್ರನ್ನ ಆಯ್ಕೆ ಮಾಡಿದ್ದು ತಪ್ಪು. ಐಪಿಎಲ್ನ 5-6 ಪಂದ್ಯಗಳಲ್ಲಿನ ಪ್ರದರ್ಶನದ ಆಧಾರದ ಮೇಲೆ ವೆಂಕಟೇಶ್ ಅಯ್ಯರ್ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇದು ಸರಿಯಲ್ಲ. ಅಯ್ಯರ್ನನ್ನ ಆಯ್ಕೆ ಮಾಡುವುದಾದರೆ, ಶಿವಂ ದುಬೆ ಅವರನ್ನ ಆಯ್ಕೆ ಮಾಡ್ಬೋದಲ್ಲ ಅಂತ ಗೌತಮ್ ಗಂಭೀರವಾದ ಪ್ರಶ್ನೆ ಕೇಳಿದ್ದಾರೆ.