Select Your Language

Notifications

webdunia
webdunia
webdunia
webdunia

ರವಿಶಾಸ್ತ್ರಿ ಹೇಳಿಕೆಗೆ ತಲೆಬಾಗಿದ ಬಿಸಿಸಿಐ

ರವಿಶಾಸ್ತ್ರಿ ಹೇಳಿಕೆಗೆ ತಲೆಬಾಗಿದ ಬಿಸಿಸಿಐ
ಮುಂಬೈ , ಶುಕ್ರವಾರ, 15 ಸೆಪ್ಟಂಬರ್ 2017 (10:25 IST)
ಮುಂಬೈ: ಟೀಂ ಇಂಡಿಯಾ ಆಟಗಾರರಿಗೆ ಎರಡು ಕ್ರಿಕೆಟ್ ಸರಣಿ ನಡುವೆ ಸ್ವಲ್ಪ ಬಿಡುವು ಕೊಡಿ ಎಂಬ ರವಿಶಾಸ್ತ್ರಿ ಬೇಡಿಕೆಗೆ ಬಿಸಿಸಿಐ  ತಲೆಬಾಗಿದೆ.


ಆಸ್ಟ್ರೇಲಿಯಾ ವಿರುದ್ಧ ಸರಣಿ ಮುಗಿದ ತಕ್ಷಣವೇ ಭಾರತ ದ.ಆಫ್ರಿಕಾ ಪ್ರವಾಸ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚು ದಿನದ ವಿರಾಮವಿಲ್ಲ. ಹಾಗಾಗಿ ಸ್ವಲ್ಪ ವಿರಾಮ ನೀಡಿ ಎಂದು ಶಾಸ್ತ್ರಿ ಬಿಸಿಸಿಐ ಆಡಳಿತ ಮಂಡಳಿ ಎದುರು ಮನವಿ ಮಾಡಿದ್ದರು.

ಈ ಮನವಿಗೆ ಸ್ಪಂದಿಸಿರುವ ಬಿಸಿಸಿಐ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ನಂತರದ ಆಫ್ರಿಕಾ ಪ್ರವಾಸಕ್ಕೆ ಬಿಡುವು ನೀಡಲು ಚಿಂತನೆ ನಡೆಸಿದೆ. ಆಫ್ರಿಕಾ ಪ್ರವಾಸದ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯವಿಲ್ಲದ ಕಾರಣ, ಟಿ20 ಪಂದ್ಯದ ವೇಳಾಪಟ್ಟಿಯನ್ನು ಪುನರ್ ಪರಿಶೀಲಿಸುವುದಾಗಿ ಬಿಸಿಸಿಐ  ಹೇಳಿದೆ.

ಇದನ್ನೂ ಓದಿ.. ನಾಯಿಯೊಂದಿಗೆ ಟಾಯ್ಲೆಟ್ ನಲ್ಲಿ ಕಾಮ ತೃಷೆ ತೀರಿಸಿದ ಕಾಮುಕ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಇಲ್ಲದ ಮೇಲೆ ಟೀಂ ಇಂಡಿಯಾ ಇದ್ದೀತೇ?