Select Your Language

Notifications

webdunia
webdunia
webdunia
webdunia

ಕೊರೋನಾ ಬಗ್ಗೆ ಹಗುರ ಮಾತನಾಡಿದ್ದ ಕೇಂದ್ರ ಸಚಿವರಿಗೇ ಈಗ ಸೋಂಕು ದೃಢ

ಕೊರೋನಾ ಬಗ್ಗೆ ಹಗುರ ಮಾತನಾಡಿದ್ದ ಕೇಂದ್ರ ಸಚಿವರಿಗೇ ಈಗ ಸೋಂಕು ದೃಢ
ನವದೆಹಲಿ , ಭಾನುವಾರ, 9 ಆಗಸ್ಟ್ 2020 (11:55 IST)
ನವದೆಹಲಿ: ಈ ಹಪ್ಪಳ ಸೇವಿಸಿದರೆ ಕೊರೋನಾ ಹೋಗುತ್ತೆ ಎಂದು ಹಗುರ ಮಾತನಾಡಿದ್ದ ಕೇಂದ್ರ ಸಚಿವ ಅರ್ಜುನ್ ಮೇಘವಾಲಗೆ ಈಗ ಕೊರೋನಾ ಸೋಂಕು ದೃಢಪಟ್ಟಿದೆ.


ಹಪ್ಪಳ ತಯಾರಿಸುವ ಕಂಪನಿಯೊಂದನ್ನು ಪ್ರಚುರಪಡಿಸಲು ಕೇಂದ್ರ ಸಚಿವರು ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಈ ಹಪ್ಪಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದನ್ನು ತಿಂದರೆ ಕೊರೋನಾ ಬರಲ್ಲ ಎಂದು ಹೇಳಿಕೆ ನೀಡಿದ್ದರು.

ಈಗ ಅದೇ ಸಚಿವರಿಗೆ ಕೊರೋನಾ ತಗುಲಿರುವುದು ವಿಪರ್ಯಾಸವಾಗಿದೆ. ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ಸಚಿವರು ಸದ್ಯಕ್ಕೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲಿನಲ್ಲಿ ತೇವಾಂಶವಿರಲು ಎಣ್ಣೆ ಬದಲು ಇದನ್ನು ಹಚ್ಚಿ