Select Your Language

Notifications

webdunia
webdunia
webdunia
webdunia

ಕೊರೋನಾ ಸಂಕಷ್ಟರ ನೆರವಿಗಾಗಿ ಡೆಲಿವರಿ ಬಾಯ್ ಆದ ದೂದ್ ಪೇಡ ದಿಗಂತ್

ಕೊರೋನಾ ಸಂಕಷ್ಟರ ನೆರವಿಗಾಗಿ ಡೆಲಿವರಿ ಬಾಯ್ ಆದ ದೂದ್ ಪೇಡ ದಿಗಂತ್
ಬೆಂಗಳೂರು , ಗುರುವಾರ, 7 ಮೇ 2020 (09:10 IST)
ಬೆಂಗಳೂರು: ನಟ ದೂದ್ ಪೇಡ ದಿಗಂತ್ ಈಗ ಪಕ್ಕಾ ಡೆಲಿವರಿ ಬಾಯ್ ಆಗಿದ್ದಾರೆ. ಅದೂ ಒಂದು ಒಳ್ಳೆಯ ಉದ್ದೇಶಕ್ಕಾಗಿ ಬೈಕ್ ನಲ್ಲಿ ಮನೆ ಮನೆಗೆ ತೆರಳಿ ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಅಷ್ಟಕ್ಕೂ ದಿಗಂತ್ ಮಾಡುತ್ತಿರುವುದು ಏನು ಗೊತ್ತಾ?


ಕೊರೋನಾದಿಂದಾಗಿ ಮನೆಯಿಂದ ಹೊರಹೋಗಲು ಸಾಧ‍್ಯವಾಗದೇ ಎಷ್ಟೋ ಜನ ಅಗತ್ಯ ವಸ್ತುಗಳಿಗಾಗಿ ಪರದಾಡುತ್ತಿದ್ದಾರೆ. ಅದರಲ್ಲೂ ಬೇಕಾದ ಔಷಧಿ ಸಿಗದೇ ಎಷ್ಟೋ ಜನ ಸಂಕಷ್ಟದಲ್ಲಿದ್ದಾರೆ. ಅಂತಹವರಿಗಾಗಿ ದಿಗಂತ್ ಈಗ ಕೆಲಸ ಮಾಡುತ್ತಿದ್ದಾರೆ.

ರೈಡರ್ಸ್ ರಿಪಬ್ಲಿಕ್ ಮೋಟಾರ್ ಕ್ಲಬ್ ನೇತೃತ್ವದಲ್ಲಿ ಮನೆ ಮನೆಗೆ ಬೈಕ್ ನಲ್ಲಿ ತೆರಳಿ ಅಗತ್ಯವಿದ್ದವರಿಗೆ ಔಷಧಿ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ದಿಗಂತ್ ರ ಈ ಮಾನವೀಯತೆಯ ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಸೇತುವಿನಿಂದ ನಿಮ್ಮ ಪ್ರೈವೆಸಿಗೆ ಧಕ್ಕೆಯಾಗುತ್ತದೆಯೇ?