Select Your Language

Notifications

webdunia
webdunia
webdunia
webdunia

ಟಿ ಸೀರೀಸ್ ಕಂಪನಿ ಮಾಲಿಕರ ವಿರುದ್ಧ ಸಿಡಿದೆದ್ದ ಸೋನು ನಿಗಂ

ಟಿ ಸೀರೀಸ್ ಕಂಪನಿ ಮಾಲಿಕರ ವಿರುದ್ಧ ಸಿಡಿದೆದ್ದ ಸೋನು ನಿಗಂ
ಮುಂಬೈ , ಮಂಗಳವಾರ, 23 ಜೂನ್ 2020 (09:29 IST)
ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ಯುವ ಗಾಯಕರ ಮೇಲೂ ತಾರತಮ್ಯ ನಡೆಯುತ್ತಿದೆ ಎಂದು ಖ್ಯಾತ ಗಾಯಕ ಯಾರ ಹೆಸರನ್ನೂ ಉಲ್ಲೇಖಿಸದೇ ಆರೋಪಿಸಿದ್ದರು.


ಆದರೆ ಆಗ ಸೋನು ಎರಡು ದೊಡ್ಡ ಮ್ಯೂಸಿಕ್ ಕಂಪನಿಗಳು ಯುವ ಗಾಯಕರಿಗೆ ಅವಕಾಶ ನೀಡುತ್ತಿಲ್ಲ ಎಂದಿದ್ದರಷ್ಟೇ ಹೊರತು ಯಾರದ್ದೂ ಹೆಸರು ಹೇಳಿರಲಿಲ್ಲ. ಆದರೆ ಇದೀಗ ಟಿ ಸೀರೀಸ್ ಮ್ಯೂಸಿಕ್ ಕಂಪನಿ ಮುಖ್ಯಸ್ಥ ಭೂಷಣ್ ಕುಮಾರ್ ವಿರುದ್ಧ ಬಹಿರಂಗವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ತನ್ನ ಚಾರಿತ್ರ್ಯ ವಧೆ ಮಾಡಲು ಯತ್ನಿಸುತ್ತಿದ್ದಾರೆಂದು ಆರೋಪಿಸಿ ಭೂಷಣ್ ವಿರುದ್ಧ ಸೋನು ಎಚ್ಚರಿಕೆ ನೀಡಿದ್ದಾರೆ. ಮೂರೂವರೆ ನಿಮಿಷಗಳ ಸುದೀರ್ಘ ವಿಡಿಯೋ ಪ್ರಕಟಿಸಿರುವ ಸೋನು ನಾನು ಹಿಂದೆ ಯುವ ಗಾಯಕರಿಗೆ ಅವಕಾಶ ನೀಡಿ ಎಂದು ಯಾರ ಹೆಸರೂ ಹೇಳದೇ ಮನವಿ ಮಾಡಿದ್ದೆನಷ್ಟೇ. ಆದರೆ ಈಗ ನನ್ನ ವಿರುದ್ಧ ಬೇಕೆಂದೇ ಚಾರಿತ್ರ್ಯ ವಧೆ ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ನಾನೀಗ ಹೆಸರು ಹೇಳಲೇಬೇಕಾಗಿದೆ. ಇಂತಹದ್ದೆಲ್ಲಾ ಮುಂದೆ ಮಾಡಿದರೆ ನಿಮ್ಮ ಬಗ್ಗೆ ಇರುವ ವಿಡಿಯೋವನ್ನು ನನ್ನ ಯೂ ಟ್ಯೂಬ್ ಚಾನೆಲ್ ನಲ್ಲಿ ಪ್ರಕಟಿಸುವೆ. ನೀವು ತಪ್ಪಾದ ವ್ಯಕ್ತಿಯನ್ನು ಕೆಣಕಿದ್ದೀರಿ ಎಂದು ಭೂಷಣ್ ಕುಮಾರ್ ವಿರುದ್ಧ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನ್ಯೂಸ್ ಆಂಕರ್ ಆಗಿದ್ದ ಶೀತಲ್ ಶೆಟ್ಟಿ ಈಗ ಡೈರೆಕ್ಟರ್