Select Your Language

Notifications

webdunia
webdunia
webdunia
webdunia

ಪದ್ಮ ಶ್ರೀ ಅವಾರ್ಡ್ ವಾಪಸಾತಿಗೆ ಸಿದ್ಧರಾದ ಕಂಗನಾ ರನಾವತ್: ಕಾರಣವೇನು ಗೊತ್ತಾ?

ಪದ್ಮ ಶ್ರೀ ಅವಾರ್ಡ್ ವಾಪಸಾತಿಗೆ ಸಿದ್ಧರಾದ ಕಂಗನಾ ರನಾವತ್: ಕಾರಣವೇನು ಗೊತ್ತಾ?
ಮುಂಬೈ , ಶನಿವಾರ, 13 ನವೆಂಬರ್ 2021 (16:49 IST)
ಮುಂಬೈ: ಬಾಲಿವುಡ್ ನಟಿ ಕಂಗನಾ ರನಾವತ್ ಮೊನ್ನೆಯಷ್ಟೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರಿಂದ ಪಡೆದುಕೊಂಡಿದ್ದ ಪ್ರತಿಷ್ಠಿತ ಪದ್ಮ ಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಲು ರೆಡಿ ಎಂದಿದ್ದಾರೆ. ಅದಕ್ಕೆ ಕಾರಣವೇನು ಗೊತ್ತಾ?

ಕಂಗನಾ ಪದ್ಮ ಶ್ರೀ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾಧ‍್ಯಮ ಸಂದರ್ಶನವೊಂದರಲ್ಲಿ ಮಾತನಾಡುವಾಗ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂದರ್ಶನದಲ್ಲಿ ಅವರು ಹುತಾತ್ಮರಿಗೆ ಅವಮಾನ ಮಾಡಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಂಗನಾ, ನಾನು 1857 ಸಂಗ್ರಾಮದ ಬಗ್ಗೆ ನನಗೆ ಗೊತ್ತು. ಆದರೆ 1947 ರಲ್ಲಿ ಯಾವ ಸಂಗ್ರಾಮ ನಡೆದಿತ್ತು ಎಂದು ನನಗೆ ಗೊತ್ತಿಲ್ಲ ಎಂದಿದ್ದೆ. ಗೊತ್ತಿದ್ದವರು ಹೇಳಿ. ಒಂದು ವೇಳೆ ನಾನು ಅವಮಾನ ಮಾಡಿದ್ದೇನೆ ಎಂದು ಯಾರಾದರೂ ಸಾಬೀತುಪಡಿಸಿದರೆ ಪದ್ಮ ಪ್ರಶಸ್ತಿ ಹಿಂದಿರುಗಿಸಲು ಸಿದ್ಧ ಎಂದು ಹೇಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪು ಅವಮಾನಕ್ಕೆ ಕ್ಷಮೆ ಯಾಚಿಸಿದ ರಕ್ಷಿತಾ, ರಚಿತಾ