Select Your Language

Notifications

webdunia
webdunia
webdunia
webdunia

ಮಕ್ಕಳಲ್ಲಿ ಭಯ ಹೋಗಲಾಡಿಸಲು ಈ ಮಂತ್ರ ಹೇಳಿಕೊಡಿ

God

Krishnaveni K

ಬೆಂಗಳೂರು , ಶುಕ್ರವಾರ, 29 ಮಾರ್ಚ್ 2024 (08:35 IST)
ಬೆಂಗಳೂರು: ಕೆಲವು ಮಕ್ಕಳು ವಿಪರೀತ ಭಯ ಪ್ರಕೃತಿಯವರಾಗಿರುತ್ತಾರೆ. ಅಥವಾ ಏನನ್ನೋ ನೋಡಿ ಭಯ ಪಟ್ಟುಕೊಂಡಿರುತ್ತಾರೆ. ಹಾಗಿದ್ದರೆ ಮಕ್ಕಳಲ್ಲಿ ಭಯ ಹೋಗಲಾಡಿಸಲು ಯಾವ ಶ್ಲೋಕ ಹೇಳಬೇಕು ಇಲ್ಲಿ ನೋಡಿ.

ಮಂತ್ರ, ಶ್ಲೋಕಗಳು ಕೇವಲ ದೇವರ ಧ‍್ಯಾನಕ್ಕಾಗಿ ಮಾತ್ರವಲ್ಲ, ನಮ್ಮಲ್ಲಿ ಆತ್ಮವಿಶ್ವಾಸ, ಧೈರ್ಯ ತುಂಬಲೂ ಸಹಕಾರಿಯಾಗುತ್ತದೆ. ಪರಮಾತ್ಮನ ಸಾನಿಧ‍್ಯವನ್ನು ನಾವು ಅನುಭವಿಸಬೇಕಾದರೆ ಮಂತ್ರ, ಶ್ಲೋಕಗಳು ಸಹಕಾರಿಯಾಗುತ್ತದೆ.

ಮಕ್ಕಳು ಯಾವುದೋ ಕೆಟ್ಟ ಕನಸು ಕಂಡು ಅಥವಾ ಇನ್ಯಾವುದೋ ಕಾರಣಗಳಿಗೆ ವಿಪರೀತ ಭಯಪಡುತ್ತಿದ್ದರೆ ಅವರಿಗೆ ಗಾಯತ್ರಿ ಮಂತ್ರ ಜಪಿಸಲು ಹೇಳಿ. ಸೂರ್ಯ ದೇವರು ನಮ್ಮಲ್ಲಿ ಶಕ್ತಿ, ಆತ್ಮವಿಶ್ವಾಸ ತುಂಬುತ್ತಾನೆ. ಈ ಕಾರಣಕ್ಕೆ ಗಾಯತ್ರಿ ಮಂತ್ರ ಜಪಿಸಿದರೆ ಉತ್ತಮ.

ಅದೇ ರೀತಿ ‘ಗುರು ಬ್ರಹ್ಮ ಗುರು ವಿಷ್ಣು’ ಎಂಬ ಗುರು ಮಂತ್ರವನ್ನು ಮಕ್ಕಳಿಗೆ ಹೇಳಿಕೊಡಿ. ಇದರಿಂದ ಅವರ ಮನಸ್ಸಿನಲ್ಲಿರುವ ಭಯ ಹೋಗುವುದಲ್ಲದೆ, ವಿದ್ಯೆಯಲ್ಲಿ ಏಕಾಗ್ರತೆ ಯಶಸ್ಸು ತಂದುಕೊಡುತ್ತದೆ. ನಮ್ಮ ವೇದಶಾಸ್ತ್ರಗಳಲ್ಲಿರುವ ಮಂತ್ರಗಳು, ಶ್ಲೋಕಗಳಿಗೆ ಅಷ್ಟು ಶಕ್ತಿಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?