Publish Date: Sat, 16 Nov 2024 (08:41 IST)
Updated Date: Sat, 16 Nov 2024 (08:47 IST)
ಬೆಂಗಳೂರು: ಶನಿವಾರ ವಿಶೇಷವಾಗಿ ಆಂಜನೇಯನ ಪ್ರಾರ್ಥನೆ ಮಾಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ. ಈ ದಿನ ಆಂಜನೇಯನ ಕಾರ್ಯಿಸಿದ್ಧಿ ಮಂತ್ರವನ್ನು ಪಠಿಸುವುದರಿಂದ ಕಷ್ಟಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ.
ಆಂಜನೇಯ ಸಾಕ್ಷಾತ್ ಶ್ರೀರಾಮಚಂದ್ರನ ಸಂಕಷ್ಟಗಳನ್ನು ಪರಿಹರಿಸಿದಾತ. ಇನ್ನು ನಾವು ಯಾವ ಲೆಕ್ಕ. ನಮ್ಮ ಜೀವನದಲ್ಲಿ ಬರುವ ಕಷ್ಟ-ನಷ್ಟಗಳು ದೂರವಾಗಿ ಯಶಸ್ಸು ಗಳಿಸಬೇಕೆಂದರೆ ಆಂಜನೇಯನ ಸೇವೆ ಮತ್ತು ಪೂಜೆ ಮಾಡುತ್ತಾ ಬರಬೇಕು. ಅದಕ್ಕಾಗಿಯೇ ಕಾರ್ಯಸಿದ್ಧಿ ಆಂಜನೇಯ ಮಂತ್ರ ಪಠಿಸುವುದು ಮುಖ್ಯ.
ಅಸಾಧ್ಯ ಸಾಧಕ ಸ್ವಾಮಿನ್ ಅಸಾಧ್ಯಂ ತಮಕಿಮ್ ವದ
ರಾಮದೂತ ಕೃಪಾಂ ಸಿಂಧೋ ಮಮಕಾರ್ಯಂ ಸಾಧಯಪ್ರಭೂ
ಇದು ವಿಶೇಷವಾಗಿ ಉದ್ದೇಶಿತ ಕಾರ್ಯಸಾಧನೆಗಾಗಿ ಹೇಳಬೇಕಾದ ಹನುಮಾನ್ ಮಂತ್ರವಾಗಿದೆ. ಹನುಮಾನ್ ಚಾಲೀಸಾವನ್ನು ಹಾಡುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ. ಅದೇ ರೀತಿ ಕಾರ್ಯಸಿದ್ಧಿ ಆಂಜನೇಯ ಮಂತ್ರ ಹೇಳುವುದರಿಂದ ಕಾರ್ಯಸಾಧನೆಯಾಗುವುದು. ಈ ಮಂತ್ರವನ್ನು 48 ದಿನಗಳ ಕಾಲ ನಿರಂತರವಾಗಿ ಭಕ್ತಿಯಿಂದ ಪಠಿಸಿದರೆ ಉತ್ತಮ.