Publish Date: Mon, 11 Nov 2024 (08:40 IST)
Updated Date: Mon, 11 Nov 2024 (08:45 IST)
ಬೆಂಗಳೂರು: ನಿಮ್ಮ ಮಕ್ಕಳು ಓದಿನಲ್ಲಿ ಚುರುಕಾಗಿಲ್ಲ,ಯಾಕೋ ಏಕಾಗ್ರತೆ ಕಳೆದುಕೊಳ್ಳುತ್ತಿದ್ದಾರೆ ಎನಿಸಿದರೆ ಈ ಎರಡು ಮಂತ್ರವನ್ನು ನಿತ್ಯವೂ ಪಠಿಸಲು ಹೇಳಿ. ಇದರಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ.
ವಿದ್ಯೆ, ಬುದ್ಧಿಗೆ ಗಣೇಶ ಮತ್ತು ಸರಸ್ವತಿ ದೇವಿಯ ಅನುಗ್ರಹ ತುಂಬಾ ಮುಖ್ಯ. ವಿಶೇಷವಾಗಿ ಸರಸ್ವತಿ ಜ್ಞಾನ ದೇವಿಯಾಗಿದ್ದು ಆಕೆಯ ಅನುಗ್ರಹವಿದ್ದರೆ ಓದಿನಲ್ಲಿ ಮುಂದೆ ಬರುತ್ತೀರಿ. ಹೀಗಾಗಿ ಮಕ್ಕಳು ಓದಿನಲ್ಲಿ ಚುರುಕಾಗಬೇಕಾದರೆ ಸರಸ್ವತಿಯ ಈ ಮಂತ್ರವನ್ನು ಪ್ರತಿನಿತ್ಯ ಪಠಿಸುವುದು ಉತ್ತಮ.
ಓಂ ಮಹಾಸರಸ್ವತೇ ನಮಃ
ಈ ಮಂತ್ರವನ್ನು ಪಠಿಸುವುದರಿಂದ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗಿ ಯಶಸ್ಸು ಸಾಧಿಸುತ್ತಾರೆ. ಅದೇ ರೀತಿ ಈ ಒಂದು ಗಣೇಶ ಮಂತ್ರವನ್ನು ಪಠಿಸುವುದರಿಂದಲೂ ಏಕಾಗ್ರತೆ ಹೆಚ್ಚುವುದು.
ಓಂ ಗಂ ಗಣಪತಯೇ ನಮಃ
ಪ್ರತಿನಿತ್ಯ ಶಾಲೆ, ಕಾಲೇಜುಗಳಿಗೆ ಹೋಗುವ ಮೊದಲು ಸ್ನಾನ ಮಾಡಿ ಈ ಎರಡು ಮಂತ್ರಗಳನ್ನು ತಪ್ಪದೇ ಪಠಿಸಲು ಹೇಳಿ. ಇದರಿಂದ ವಿದ್ಯಾರ್ಥಿಗಳ ಜೀವನದಲ್ಲಿ ಗಮನಾರ್ಹ ಬದಲಾವಣೆ ಕಂಡುಬರುವುದು.