Publish Date: Thu, 20 Aug 2020 (07:18 IST)
Updated Date: Thu, 20 Aug 2020 (10:31 IST)
ಬೆಂಗಳೂರು : ಮನೆ ಏಳಿಗೆ ಹೊಂದಲು ಆ ಮನೆಯ ಮಹಿಳೆ ಪ್ರಮುಖ ಪಾತ್ರ ವಹಿಸುತ್ತಾಳೆ. ಹಾಗೇ ಮನೆ ನಾಶವಾಗಲು ಕೂಡ ಆಕೆಯೇ ಮುಖ್ಯ ಕಾರಣಳಾಗಿರುತ್ತಾಳೆ. ಆದಕಾರಣ ನಿಮ್ಮ ಮನೆ ಏಳಿಗೆ ಹೊಂದಲು ರಾತ್ರಿ ಮಲಗುವ ಮುನ್ನ ಮಹಿಳೆಯರು ತಪ್ಪದೇ ಈ ಕೆಲಸ ಮಾಡಿ.
ಶಾಸ್ತ್ರದ ಪ್ರಕಾರ ಮನೆಯ ಅಡುಗೆಮನೆಯಲ್ಲಿ ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿ ನೆಲೆಸಿರುತ್ತಾಳೆ ಎಂದು ಹೇಳುತ್ತಾರೆ. ಆದಕಾರಣ ರಾತ್ರಿ ಮಲಗುವ ಮುನ್ನ ಅಡುಗೆ ಮನೆಯನ್ನು ಸ್ವಚ್ಛ ಮಾಡಿ ಮಲಗಿ, ಅಲ್ಲಿದ್ದ ಪಾತ್ರೆಗಳನ್ನು ತೊಳೆಯಿರಿ, ಕಸಗಳು ಬಿದಿದ್ದರೆ ಕ್ಲೀನ್ ಮಾಡಿ ಮಲಗಿ. ಇದರಿಂದ ಅನ್ನಪೂರ್ಣೇಶ್ವರಿ ದೇವಿ ಪ್ರಸನ್ನಳಾಗಿ ಮನೆಯ ಸದಾ ಸಮೃದ್ಧಿ ತುಂಬಿರುವಂತೆ ಅನುಗ್ರಹಿಸುತ್ತಾಳೆ.