Webdunia - Bharat's app for daily news and videos

Install App

ತಿಮ್ಮಪ್ಪನ ವಿಶೇಷ ದರ್ಶನ : ಆನ್‌ಲೈನ್ ಟಿಕೆಟ್ ಬುಕಿಂಗ್ ಆರಂಭ

Webdunia
ಶುಕ್ರವಾರ, 28 ಜನವರಿ 2022 (14:48 IST)
ತಿರುಪತಿ : ದೇಶದ ಪ್ರಮುಖ ಯಾತ್ರಾ ಸ್ಥಳದಲ್ಲಿ ಒಂದಾಗಿರುವ ತಿರುಪತಿ ವೆಂಕಟೇಶ್ವರ ದೇವರ ವಿಶೇಷ ದರ್ಶನ ಪಡೆಯಲು ಟಿಟಿಡಿ ಆನ್ಲೈನ್ ಬುಕಿಂಗ್ ಸರ್ವಿಸ್ ಅನ್ನು ಆರಂಭಿಸಿದೆ.

ಫೆಬ್ರವರಿ ತಿಂಗಳಿನಲ್ಲಿ ಆಗಮಿಸುವ ಭಕ್ತರಿಗೆ ಟಿಟಿಡಿ ಆನ್ಲೈನ್ ಬುಕಿಂಗ್ ಅನ್ನು ಇಂದು (ಜ.28) ಬೆಳಗ್ಗೆ 9 ಗಂಟೆಯಿಂದ ಆರಂಭಿಸಿದೆ.

 
ವಿಶೇಷ ದರ್ಶನಕ್ಕೆ 300 ರೂಗಳನ್ನು ನಿಗದಿ ಪಡಿಸಿದ್ದು, ಟಿಟಿಡಿಯ ಅಧಿಕೃತ ವೆಬ್ ಸೈಟ್ ನಲ್ಲಿ ಆನ್ಲೈನ್ನಲ್ಲಿ ಬುಕಿಂಗ್ ಮಾಡಬಹುದಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಮಲ ತಿರುಪತಿ ದೇವಸ್ಥಾನಂ ಅಥವಾ ವೆಂಕಟೇಶ್ವರ ದೇವಸ್ಥಾನದ ಅಧಿಕೃತ ವೆಬ್ಸೈಟ್ನಿಂದ ಅನ್ಲೈನ್ ಬುಕಿಂಗ್ ಆರಂಭಿಸಿದೆ.

 
ಇನ್ನು ಉಚಿತವಾಗಿ ನೀಡುವ ಸೇವಾ ದರ್ಶನಕ್ಕೆ ಜನವರಿ 29ರಿಂದ ಆನ್ಲೈನ್ ಬುಕಿಂಗ್ ಆರಂಭವಾಗಲಿದೆ. ಟಿಕೆಟ್ ಬುಕ್ ಮಾಡುವವರಿಗೆ ಇ ಮೇಲ್ ಐಡಿ ಕಡ್ಡಾಯವಾಗಿದೆ. ಬುಕಿಂಗ್ ಮಾಡಿದ ತಕ್ಷಣ ಒಟಿಪಿ, ಹಾಗೂ ಬುಕಿಂಗ್ ಆದ ಮೆಸೇಜ್ ಇ ಮೇಲ್ಗೆ ಬರಲಿದೆ ಎಂದು ತಿಳಿಸಲಾಗಿದೆ.

ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನಲೆ ಕೊರೊನಾ ಆತಂಕ ಎದುರಾಗಿದೆ. ಈ ಕಾರಣದಿಂದ ಪ್ರತಿದಿನ 50 ಸಾವಿರದಿಂದ ಒಂದು ಲಕ್ಷ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

 
ಆನ್ಲೈನ್ನಲ್ಲಿ ಬುಕಿಂಗ್ ಮಾಡಿದವರಿಗೆ ವಿಶೇಷ ದರ್ಶನ ಸಮಯ – 9:00 ಹಾಗೂ ಬೆಳಿಗ್ಗೆ, 5:00 ಸಂಜೆ ಆಗಿದೆ. https://tirupatibalaji.ap.gov.in, https://ttdsevaonline.com ಇದು ಟಿಟಿಡಿಯ ಅಧಿಕೃತ ಲಿಂಕ್ ಆಗಿದ್ದು, ಟಿಟಿಡಿ ಲಡ್ಡು ಸೇವಾ ಆನ್ಲೈನ್ ಬುಕಿಂಗ್ ಟಿಕೆಟ್ಗಳನ್ನು ಕೂಡ ಪಡೆಯಬಹುದು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Meghalaya Murder Case: ಗಂಡನ ಜತೆಗಿನ ಬೆಡ್‌ ರೂಂ ಸಂಗತಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ಳು ಸೋನಮ್

Bengaluru Stampede: ಆರ್‌ಸಿಬಿ ಮಾರ್ಕೆಂಟಿಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಕಾನೂನಿನಲ್ಲಿ ಹಿನ್ನಡೆ

Indore Raja Raguvamshi murder: ಅಬ್ಬಾ.. ಗಂಡನನ್ನು ಕೊಂದು ಸೋನಂ ಪ್ಲ್ಯಾನ್ ಏನಿತ್ತು ಗೊತ್ತಾ

Rajasthan: ಹುಲಿ ದಾಳಿಗೆ ಮೂರನೇ ಬಲಿ, ದೇವಾಲಯದ ಉಸ್ತುವಾರಿ ಸಾವು

ಆತುರ, ಕ್ರೆಡಿಟ್ ವಾರ್ ಗೆ 11 ಅಮಾಯಕರ ಬಲಿಯಾದ್ರು: ಸಿ.ಟಿ.ರವಿ

ಮುಂದಿನ ಸುದ್ದಿ
Show comments