Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ತಾರೆ: ಅಂಜನೇಯ

ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ತಾರೆ: ಅಂಜನೇಯ
ಚಿತ್ರದುರ್ಗ , ಸೋಮವಾರ, 2 ಏಪ್ರಿಲ್ 2018 (16:38 IST)
ಸಿದ್ದರಾಮಯ್ಯನವರಿಗೆ ರಾಜ್ಯದೆಲ್ಲೆಡೆ ವರ್ಚಸ್ಸಿದೆ.ಅವರು ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ರೂ ಗೆಲ್ತಾರೆ. ಅವರನ್ನ ಗೆಲುವನ್ನ ಯಾರಿಂದಲೂ ತಡೆಯೋಕೆ ಆಗಲ್ಲ ಹೀಗಂತ ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಲೇವಡಿ ಮಾಡೋದು, ಸೋಲಿಸ್ತೀವಿ ಅನ್ನೋದು ಅದು ವಿರೋಧಿಗಳ ನೀತಿ.ವರುಣದಲ್ಲಿ ಬಿಎಸ್ ವೈ ಪುತ್ರನನ್ನ ನಿಲ್ಲಿಸ್ತೀವಿ ಅಂದರೆ ನಾವು ಭಯ ಪಡುವ ಆಗತ್ಯವಿಲ್ಲ.ಅವರು ನಮ್ಮನ್ನು ಸೋಲಿಸೋಕೆ ಏನು ತಂತ್ರ ಮಾಡ್ತಾರೋ ಅದಕ್ಕೆ ಪ್ರತಿತಂತ್ರ ಮಾಡ್ತೀವಿ ಅಂತ ಹೇಳಿದ್ದಾರೆ.
 
ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಕುರಿತ ಸುಪ್ರೀಂ ಕೋರ್ಟ್ ತೀರ್ಪಿನ ವಿಚಾರ ಕುರಿತು ಮಾತನಾಡಿದ ಅವರು , ದೇಶದಲ್ಲಿ ಕೆಲವೆಡೆ ಅಸ್ಪೃಷ್ಯತೆ ಇನ್ನೂ ಜೀವಂತ ಇದೆ.ಕೆಲವು ಕಡೆ ವಾತಾವರಣ ಬದಲಾಗಿದೆ.ಮೇಲ್ವರ್ಗದ ಜನರು‌ ಪಶ್ಚಾತ್ತಾಪ ಪಟ್ಟು ಬದಲಾಗಿದ್ದಾರೆ.ಆದರೆ ಇನ್ನೂ ಕೆಲವರು ದೌರ್ಜನ್ಯ ಮಾಡುತ್ತಿರುವುದು ಕಂಡು ಬಂದಿದೆ ಎಂದರು.
 
ಹೀಗಾಗಿ ಪ್ರಧಾನಮಂತ್ರಿ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಈ ಕುರಿತು ಮಾತನಾಡಿದ್ದಾರೆ.ತೀರ್ಪಿನ ಕುರಿತು ಮರು ಪರಿಶೀಲನೆ ಅಗತ್ಯ ಇದೆ ಅಂತ ಚಿತ್ರದುರ್ಗದಲ್ಲಿ ಹೆಚ್.ಆಂಜನೇಯ ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ತಾಕತ್ತಿದ್ರೆ ಮೊದ್ಲು ಚಾಮುಂಡೇಶ್ಚರಿ ಕ್ಷೇತ್ರದಿಂದ ಗೆದ್ದು ಬನ್ನಿ: ಸಿಎಂಗೆ ಈಶ್ವರಪ್ಪ ಸವಾಲ್