Publish Date: Thu, 17 May 2018 (08:43 IST)
Updated Date: Thu, 17 May 2018 (08:44 IST)
ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ದೊಂಬರಾಟ ಜೋರಾಗಿದೆ. ಕಾಂಗ್ರೆಸ್-ಜೆಡಿಎಸ್ ಒಂದೆಡೆ, ಬಿಜೆಪಿ ಇನ್ನೊಂದೆಡೆ ಸರ್ಕಾರ ರಚನೆ ವಿಚಾರವಾಗಿ ಮೇಲಾಟ ನಡೆಸುತ್ತಿವೆ.
ಇದರ ಮಧ್ಯೆ ಎಚ್ ಡಿ ಕುಮಾರಸ್ವಾಮಿ ಅಥವಾ ಬಿಎಸ್ ಯಡಿಯೂರಪ್ಪ ಸಿಎಂ ಆಗಬಹುದು ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ರಾಜಕಾರಣಿಗಳ ಪರಮಾಪ್ತ ಜ್ಯೋತಿಷಿ ದ್ವಾರಕಾನಾಥ್ ಗುರೂಜಿ ಇವರಿಬ್ಬರೂ ಆಗಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಸದ್ಯದ ರಾಜಕೀಯ ವಿದ್ಯಮಾನಗಳನ್ನು ಗಮನಿಸಿ ಭವಿಷ್ಯ ನುಡಿದಿರುವ ಅವರು ‘ಯಡಿಯೂರಪ್ಪ ಸಿಎಂ ಆದರೂ ಹೆಚ್ಚು ದಿನ ಉಳಿಯಲ್ಲ. ಎಚ್ ಡಿ ಕುಮಾರಸ್ವಾಮಿ, ಯಡಿಯೂರಪ್ಪ ಇಬ್ಬರೂ ಸಿಎಂ ಆಗಲ್ಲ’ ಎಂದು ಖಾಸಗಿ ವಾಹಿನಿಯೊಂದಕ್ಕೆ ಹೇಳಿಕೊಂಡಿದ್ದಾರೆ. ಹಾಗಿದ್ದರೆ ಮೂರನೇ ವ್ಯಕ್ತಿ ಯಾರು? ಜ್ಯೋತಿಷಿ ಭವಿಷ್ಯ ನಿಜವಾಗುತ್ತಾ? ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.