Publish Date: Thu, 17 May 2018 (08:39 IST)
Updated Date: Thu, 17 May 2018 (08:42 IST)
ಬೆಂಗಳೂರು: ಇಂದು ಬಿಜೆಪಿ ನೇತೃತ್ವದಲ್ಲಿ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ. ಬಿಎಸ್ ವೈ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರಂತೆ!
ಹಾಗಂತ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಹಾಕಿ ಸಂಚಲನ ಮೂಡಿಸಿದ್ದಾರೆ. ಸುರೇಶ್ ಕುಮಾರ್ ಸಂದೇಶದಿಂದಾಗಿ ಬಿಜೆಪಿಯಲ್ಲಿ ಹೊಸ ಸಂಚಲನವೇ ಉಂಟು ಮಾಡಿತು.
ಅದಕ್ಕೆ ಸರಿಯಾಗಿ ರಾತ್ರಿ ವೇಳೆಗೆ ರಾಜ್ಯಪಾಲರಿಂದ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ಸುದ್ದಿ ಬಂದಿತು. ಈ ಬಗ್ಗೆ ಮತ್ತೆ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ನಾಯಕರು ಬಿಎಸ್ ವೈ ಮುಖ್ಯಮಂತ್ರಿಯಾಗುವ ಸುದ್ದಿಯನ್ನು ಖಚಿತಪಡಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.