Publish Date: Wed, 16 May 2018 (22:33 IST)
Updated Date: Wed, 16 May 2018 (22:35 IST)
ಬೆಂಗಳೂರು: ರಾತ್ರೋ ರಾತ್ರಿ ಬಿಜೆಪಿ ಸರ್ಕಾರ ರಚಿಸುವ ಸುದ್ದಿ ಬಂದ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ಮನೆಗೆ ರಾಜ್ಯ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಆಗಮಿಸಿದ್ದಾರೆ.
ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಬಿಎಸ್ ವೈ ಮನೆಗೆ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ ಹೂಗುಚ್ಛ ಸಮೇತ ಶುಭಾಷಯ ಕೋರಲು ಆಗಮಿಸಿದ್ದು, ನಾಳಿನ ಕಾರ್ಯಕ್ರಮಕ್ಕೆ ನಡೆಯಬೇಕಾದ ತಯಾರಿ ಕುರಿತಂತೆ ಮಾತುಕತೆ ನಡೆಸಿದರು.
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ 11 ಗಂಟೆಗಳ ಕಾಲಾವಕಾಶವೂ ಇಲ್ಲ. ಹೀಗಾಗಿ ರತ್ನಪ್ರಭಾ ತರಾತುರಿಯಲ್ಲಿ ನಡೆಯಬೇಕಾದ ಕಾರ್ಯಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.