Select Your Language

Notifications

webdunia
webdunia
webdunia
webdunia

ಸಾವಿನ ಬಗ್ಗೆ ಮೊದಲೇ ಶಿರೂರು ಶ್ರೀಗಳಿಗೆ ಸಿಕ್ಕಿತ್ತಾ ಮುನ್ಸೂಚನೆ?!

ಸಾವಿನ ಬಗ್ಗೆ ಮೊದಲೇ ಶಿರೂರು ಶ್ರೀಗಳಿಗೆ ಸಿಕ್ಕಿತ್ತಾ ಮುನ್ಸೂಚನೆ?!
ಬೆಂಗಳೂರು , ಶುಕ್ರವಾರ, 20 ಜುಲೈ 2018 (09:35 IST)
ಬೆಂಗಳೂರು: ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರಿಗೆ ಸಾವಿನ ಬಗ್ಗೆ ಮೊದಲೇ ದೈವದಿಂದ ಸೂಚನೆ ಸಿಕ್ಕಿತ್ತೇ?

ಕೆಲವು ದಿನಗಳ ಹಿಂದೆ ಪಡುಬಿದ್ರೆ ಕೊಡಮಣಿತ್ತಾಯ ದೈವ ಕೋಲದಲ್ಲಿ ಭಾಗಿಯಾಗಿದ್ದ ಶ್ರೀಗಳಿಗೆ ದೈವ ನಿಮಗೆ ಅಪಾಯವಿದೆ ಎಂದು ಸೂಚನೆ ನೀಡಿತ್ತಂತೆ. ಆದರೆ ಶ್ರೀಗಳು ನಾನು ಗಟ್ಟಿಯಾಗಿದ್ದೇನೆ ಎಂದು ಪ್ರತಿಕ್ರಿಯಿಸುವ ಮೂಲಕ ದೈವದ ಸೂಚನೆಯನ್ನು ಕಡೆಗಣಿಸಿದರು ಎಂದು ಖಾಸಗಿ ವಾಹಿನಿ ವರದಿ ಮಾಡಿದೆ.

ಹೀಗಾಗಿ ಶ್ರೀಗಳಿಗೆ ಅಪಾಯ ಕಾದಿರುವ ಬಗ್ಗೆ ಮೊದಲೇ ದೈವ ಸೂಚನೆ ನೀಡಿತ್ತು ಎನ್ನಲಾಗಿದೆ. ಇನ್ನಪಂದೆಡೆ ಕೊನೆಯದಾಗಿ ಶ್ರೀಗಳು ಪಟ್ಟದ ದೇವರ ವಿಚಾರಕ್ಕಾಗಿ ನಡೆಯುತ್ತಿದ್ದ ಸಂಘರ್ಷದ ಬಗ್ಗೆ ಮಾತನಾಡಿದ್ದರು ಎನ್ನಲಾಗಿದ್ದು, ವಿಠಲ ಮಾತ್ರ ನನ್ನ ಸ್ವತ್ತು ಎಂದಿದ್ದರು ಎನ್ನಲಾಗಿದೆ.

ಶ್ರೀಗಳ ಸಾವಿನಿಂದಾಗಿ ಸೂತಕದ ಛಾಯೆ ಮೂಡಿದ್ದ ಉಡುಪಿ ಮಠದಲ್ಲಿ ಇಂದು ಪೂಜೆ ನಡೆಸಲು ಪೊಲೀಸರು ಅನುಮತಿ ನೀಡಿದ್ದಾರೆ. ಆದರೆ ಶ್ರೀಗಳ ಸಾವಿನ ಬಗ್ಗೆ ಅನುಮಾನಗಳಿರುವ ಕಾರಣ, ಶಿರೂರು ಶ್ರೀಗಳ ಕೊಠಡಿ, ಮಠದಲ್ಲಿ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರ ಸೋನಿಯಾ ವಿರುದ್ಧ ಪಿತೂರಿ ನಡೆಸುತ್ತಿದೆ- ಕಾಂಗ್ರೆಸ್‌ ಆರೋಪ