Select Your Language

Notifications

webdunia
webdunia
webdunia
webdunia

ರಾಮನಗರದಲ್ಲಿ ಮತ್ತೆ ಕಂಪಿಸಿದ ಭೂಮಿ! ಭಯಭೀತರಾದ ಜನತೆ

ರಾಮನಗರದಲ್ಲಿ ಮತ್ತೆ ಕಂಪಿಸಿದ ಭೂಮಿ! ಭಯಭೀತರಾದ ಜನತೆ
ರಾಮನಗರ , ಭಾನುವಾರ, 11 ಸೆಪ್ಟಂಬರ್ 2022 (09:42 IST)
ರಾಮನಗರ : ತಾಲೂಕಿನಲ್ಲಿ ಮತ್ತೆ ಭೂಕಂಪನದ ಅನುಭವವಾಗಿದ್ದು, ಭಾರೀ ಶಬ್ದಕ್ಕೆ ಜನರು ಆತಂಕಗೊಂಡು ತಮ್ಮ ಮನೆಗಳಿಂದ ಹೊರಗಡೆ ಓಡಿದ್ದಾರೆ.

ರಾಮನಗರ ತಾಲೂಕಿನ ಬೆಜ್ಜರಹಳ್ಳಿ ಕಟ್ಟೆಯಲ್ಲಿ ಇಂದು ಸಂಜೆ 5:40 ಹಾಗೂ 7:15ರ ಸುಮಾರಿಗೆ 2 ಬಾರಿ ಭೂಮಿ ಕಂಪಿಸಿರುವಂತೆ ಅನುಭವವಾಗಿದೆ.

ಭಾರೀ ಶಬ್ದ ಕೇಳಿ ಬಂದ ಹಿನ್ನೆಲೆ ಭೂಕಂಪವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದು, ಭಯದಿಂದ ಹೆದರಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಆದರೆ ರಿಕ್ಟರ್ ಮಾಪನದಲ್ಲಿ ಯಾವುದೇ ಕಂಪನ ದಾಖಲಾಗಿಲ್ಲ ಎನ್ನಲಾಗಿದೆ.

ಇಂದು ಮುಂಜಾನೆಯೂ 5:30ರ ಸುಮಾರಿಗೆ ರಾಮನಗರ ತಾಲೂಕಿನ ಪಾದರಹಳ್ಳಿ ಬಳಿ ಭೂಮಿ ಕಂಪಿಸಿರುವ ಅನುಭವ ಆಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮದುವೆ ಸಮಯದಲ್ಲಿ ತಾಳಿ ಕಿತ್ತುಕೊಂಡು ಶಾಕ್ ಕೊಟ್ಟ ಪ್ರಿಯತಮ!