Select Your Language

Notifications

webdunia
webdunia
webdunia
webdunia

ಮತ್ತೆ ಕಂಪಿಸಿದ ಭೂಮಿ,ಭಯಭೀತರಾದ ಜನತೆ!

ಮತ್ತೆ ಕಂಪಿಸಿದ ಭೂಮಿ,ಭಯಭೀತರಾದ ಜನತೆ!
ಕಲಬುರಗಿ , ಗುರುವಾರ, 1 ಸೆಪ್ಟಂಬರ್ 2022 (11:16 IST)
ಕಲಬುರಗಿ : ವಿಜಯಪುರದ ಬಳಿಕ ಇದೀಗ ಕಲಬುರಗಿಯಲ್ಲಿ ಭೂ ಕಂಪನದ ಅನುಭವವಾಗಿದೆ.

ಚಿಂಚೋಳಿ ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ಭಾರೀ ಶಬ್ಧದೊಂದಿಗೆ ಲಘು ಭೂ ಕಂಪನದ ಅನುಭವವಾಗಿದೆ. ಭಯಭೀತರಾಗಿ ಜನರು ಮನೆಯಿಂದ ಹೊರಗೋಡಿ ಬಂದಿದ್ದಾರೆ. ರಾತ್ರಿ 11 ಸುಮಾರಿಗೆ ಭೂಕಂಪಿಸಿದೆ.

ಚಿಂಚೋಳಿ ತಾಲೂಕಿನ ಚಿಮ್ಮಾಇದ್ಲಾಯಿ, ದಸ್ತಾಪುರ, ಐಪಿ ಹೋಸಳ್ಳಿ ಹಾಗೂ ಸುಲೇಪೆಟ್ನಲ್ಲಿ ಕಂಪನದ ಅನುಭವವಾಗಿದೆ.

ಈ ಹಿಂದೆ ಗಡಿಕೇಶ್ವರದಲ್ಲಿ ಭೂ ಕಂಪನ ಆಗುತ್ತಿತ್ತು. ಇದೀಗ ಗಡಿಕೇಶ್ವರ ಸಮೀಪದ ಗ್ರಾಮಗಳಲ್ಲಿ ಭಾರೀ ಶಬ್ದದೊಂದಿಗೆ ಲಘು ಭೂ ಕಂಪನವಾಗಿದೆ. ಭಾರೀ ಶಬ್ದದಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ನಲ್ಲಿ ಹೋಗಲು ಇಷ್ಟವಿಲ್ಲವೆಂದು ಬೈಕ್ ಕದ್ದ ಭೂಪ!