Select Your Language

Notifications

webdunia
webdunia
webdunia
webdunia

ಮತ್ತೆ ಕಂಪಿಸಿದ ಭೂಮಿ! ಆತಂಕಕ್ಕೀಡಾದ ಜನತೆ

ಮತ್ತೆ ಕಂಪಿಸಿದ ಭೂಮಿ! ಆತಂಕಕ್ಕೀಡಾದ ಜನತೆ
ಮಡಿಕೇರಿ , ಗುರುವಾರ, 18 ಆಗಸ್ಟ್ 2022 (09:52 IST)
ಮಡಿಕೇರಿ : ಕೆಲ ತಿಂಗಳ ಹಿಂದೆ ಸರಣಿ ಭೂಕಂಪನದ ಅನುಭವಾಗಿದ್ದ ಕೊಡಗು ಹಾಗೂ ದಕ್ಷಿಣ ಕನ್ನಡದ ಗಡಿಭಾಗದಲ್ಲಿ ಇಂದು ಮತ್ತೆ ಭೂಮಿ ಕಂಪಿಸಿದೆ.
 
ಭಾರಿ ಶಬ್ದದೊಂದಿಗೆ ಭೂಕಂಪನದ ಅನುಭವ ಗಡಿಭಾಗದ ಜನರಿಗೆ ಇಂದು ಸಂಜೆ 6:20ರ ಸಮಯಕ್ಕೆ ಆಗಿದೆ. ಕೊಯನಾಡಿನ ಮಂಗಳಪಾರೆ ಬಳಿ ಮತ್ತು ಸುಳ್ಯ ಭಾಗದ ಹಲವು ಗ್ರಾಮಗಳಿಗೆ ಭೂಕಂಪನವಾಗಿದೆ. ಸ್ಥಳೀಯರು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. 

ಸುಳ್ಯದ ಕಲ್ಮಕಾರಿನ ಮೆಂಟೆಕಜೆ, ಗುಳಿಕ್ಕಾನ ಪ್ರದೇಶದಲ್ಲಿ ಶಬ್ದ ಹಾಗೂ ಕಂಪನ ಹೆಚ್ಚಾಗಿ ಅನುಭವವಾಗಿದೆ. ಕೊಲ್ಲಮೊಗ್ರದವರೆಗೂ ಈ ಶಬ್ದ ಕೇಳಿಸಿದೆ ಎನ್ನಲಾಗಿದೆ.

ಮಾತ್ರವಲ್ಲದೇ ಕಲ್ಲುಗುಂಡಿಯ ಚಟ್ಟೆಕಲ್ಲು, ಕೊಯನಾಡಿನ ಮಂಗಳಪಾರೆ ಎಂಬಲ್ಲಿ ಭೂಮಿ ಕಂಪಿಸಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಕೃಷ್ಣ ಜನ್ಮಾಷ್ಠಮಿ ನೆಪದಲ್ಲಿ ವ್ಯಾಪಾರಿಗಳಿಂದ ಹಣ ಕಿತ್ತುಕೊಂಡ ಪೊಲೀಸರು!