Select Your Language

Notifications

webdunia
webdunia
webdunia
webdunia

ನಮಗೆ ಚಿತ್ರಹಿಂಸೆ ಕೊಡಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಅಳಲು ತೋಡಿದ್ದೇಕೆ?!

ನಮಗೆ ಚಿತ್ರಹಿಂಸೆ ಕೊಡಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಅಳಲು ತೋಡಿದ್ದೇಕೆ?!
ಬೆಂಗಳೂರು , ಗುರುವಾರ, 31 ಮೇ 2018 (10:28 IST)
ಬೆಂಗಳೂರು: ನನಗೆ ಮತ್ತು ನನ್ನ ಜತೆಗಿರುವವರಿಗೆ ರಾಜಕೀಯ ಕಾರಣಗಳಿಂದಾಗಿ ಚಿತ್ರ ಹಿಂಸೆ ಕೊಡಲಾಗುತ್ತಿದೆ ಎಂದು ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದ್ದಕ್ಕಿದ್ದ ಹಾಗೆ ಡಿಕೆಶಿ ಇಂತಹದ್ದೊಂದು ಆರೋಪ ಮಾಡಲು ಕಾರಣವೇನು ಗೊತ್ತಾ?

ಅವರೇ ಹೇಳುವಂತೆ ‘ನಮ್ಮವರ ಮೇಲೆ ಮೋದಿ, ಅಮಿತ್ ಶಾ ಸಿಬಿಐ ಛೂ ಬಿಟ್ಟು ಚಿತ್ರಹಿಂಸೆ ಕೊಡುತ್ತಿದ್ದಾರೆ. 11 ಜನರ ಮೇಲೆ ಸಿಬಿಐ ಸರ್ಚ್ ವಾರೆಂಟ್ ಹೊರಡಿಸಿದ್ದಾರೆ. ನಮ್ಮವರ ಮನೆ ಮೇಲೆ ದಾಳಿ ನಡೆಸಲು ಮೋದಿ, ಶಾ ಸೂಚಿಸಿದ್ದಾರೆ. ಈ ಮೂಲಕ ಚಿತ್ರಹಿಂಸೆ ಕೊಡುತ್ತಿದ್ದಾರೆ’ ಎಂದು ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನೋಟಾಗಿಂತಲೂ ಕಡಿಮೆ ಮತ ಪಡೆದ ಹುಚ್ಚ ವೆಂಕಟ್!